ಹೈಸ್ಕೂಲ್ ಮೊದಲನೇ ವರ್ಷ ಚೆನ್ನರಾಯಪಟ್ಟಣದಲ್ಲಿ ಓದ್ತಾ ಇದ್ದೆ. ಟಾಕೀಸ್ ನಲ್ಲಿ ತಿಂಗಳಿಗೆ 5 ರೂಪಾಯಿ ಸಂಬಳಕ್ಕೆ ಗೇಟ್ ಕೀಪರ್ ಕೆಲಸಾ ಮಾಡ್ತಾ ಇದ್ದೆ. ಒಂದು ಚಿಕ್ಕ ಕೋಣೆ ಬಾಡಿಗೆಗೆ ಪಡೆದಿದ್ದೆ. ಸೆಕೆಂಡ್ ಶೋ ಮುಗಿಸಿ ಮನೆಗೆ ತಲುಪಿ ಮಲಗುವಷ್ಟರಲ್ಲಿ ತಡವಾಗುತಿತ್ತು.
ಅದೊಂದು ದಿನ ಬೆಳಗ್ಗೆ ಯಾರೋ ಕೋಣೆ ಬಾಗಿಲ ಬಡಿದ ಸದ್ದಾಯಿತು.
SLB: “I am SL Bhyrappa from Karnataka, a Kannada novelist.”
PM Narendra Modi: “Sir, who doesn’t know you? Which book are you writing now?”
SLB: “Not any new book really.”
PM Modi: “Please don’t stop writing, Sir. Your readers across India want your books and intellect.”
“ಸಾಹಿತಿಗಳ ವಲಯದಲ್ಲಿ ನಾನೊಬ್ಬನೇ ಏಕಾಂಗಿಯಾಗಿ
@narendramodi
ಅವರ ಪರ ನಿಂತೆ. ನಾನು ಕೆಲ ವರ್ಷ ಗುಜರಾತ್ನಲ್ಲಿ ಇದ್ದೆ. ಮೋದಿ ಆ ರಾಜ್ಯವನ್ನು ಬದಲಿಸಿದ ಬಗ್ಗೆ ನನಗೆ ಗೊತ್ತು. ಭಾರತದಲ್ಲಿ ಮೋದಿ ಸರ್ಕಾರದಂತಹ ಸರ್ಕಾರ ಇದುವರೆಗೆ ಬಂದಿರಲಿಲ್ಲ.”
ಡಾ. ಎಸ್. ಎಲ್. ಭೈರಪ್ಪ
“ನಾನು ಹುಟ್ಟಿದ್ದು 1931ರಲ್ಲಿ. ದೇಶಕ್ಕೆ ಸ್ವಾತಂತ್ರ್ಯಬಂದಾಗ ನನಗೆ 16 ವರ್ಷ. ಆಗಿನಿಂದಲೂ ರಾಜಕೀಯ ನಾಯಕರನ್ನು ಗಮನಿಸುತ್ತಿದ್ದೇನೆ. ನರೇಂದ್ರ ಮೋದಿ ಅವರಂತಹ ಡೈನಮಿಕ್ ಲೀಡರ್ ಇದುವರೆಗೂ ಯಾರೂ ಬಂದಿಲ್ಲ. 2024 ಹಾಗೂ 2029ರ ಲೋಕಸಭಾ ಚುನಾವಣೆಯಲ್ಲೂ
@narendramodi
ಅವರು ಹೆಚ್ಚೆಚ್ಚು ಬಹುಮತದಿಂದ ಗೆಲ್ಲಬೇಕು.”
ಡಾ. ಎಸ್. ಎಲ್. ಭೈರಪ್ಪ
“ಯಾವುದೇ ಪ್ರಶಸ್ತಿ ಬಂದರೂ ಉಳಿಯುವುದು ನನ್ನ ಕೃತಿಗಳು ಮಾತ್ರ. ಮೌಲ್ಯಯುತ ಕೃತಿಗಳನ್ನು ಸಮಾಜಕ್ಕೆ ನೀಡಿದ್ದೇನೆ. ಹೀಗಾಗಿ ಕೇಂದ್ರ ಸರ್ಕಾರ ನನ್ನನ್ನು ಗುರುತಿಸಿರುವುದು ಸಂತೋಷದ ಸಂಗತಿ.”
- ಡಾ॥ ಎಸ್.ಎಲ್. ಭೈರಪ್ಪ
“ದೇಶಕ್ಕೆ ಸ್ವಾತಂತ್ರ್ಯಬಂದಾಗ ನನಗೆ 16 ವರ್ಷ. ಆಗಿನಿಂದಲೂ ರಾಜಕೀಯ ನಾಯಕರನ್ನು ಗಮನಿಸುತ್ತಿದ್ದೇನೆ. ನರೇಂದ್ರ ಮೋದಿ ಅವರಂತಹ ಡೈನಮಿಕ್ ಲೀಡರ್ ಇದುವರೆಗೂ ಯಾರೂ ಬಂದಿಲ್ಲ. ಭವಿಷ್ಯದಲ್ಲಿ ಎಂತಹ ಭೀಕರ ಪರಿಸ್ಥಿತಿ ದೇಶಕ್ಕೆ ಬಂದರೂ ಅದನ್ನು ಎದುರಿಸುವ ಶಕ್ತಿ ನರೇಂದ್ರ ಮೋದಿ ಅವರಿಗೆ ಮಾತ್ರ ಇದೆ.”
ಡಾ. ಎಸ್. ಎಲ್. ಭೈರಪ್ಪ
"ಟಿಪ್ಪು ಸ್ವಭಾವತಃ ಕ್ರೂರಿ, ಆತ ಶೌರ್ಯನಲ್ಲ, ವೀರನೂ ಅಲ್ಲ, ಧರ್ಮ ಸಹಿಷ್ಣುವೂ ಆಗಿರಲಿಲ್ಲ. ರಾಷ್ಟ್ರೀಯತೆ, ರಾಷ್ಟ್ರಪ್ರೇಮ ಆತನಲ್ಲಿ ಇರಲಿಲ್ಲ. ಅನ್ಯ ಧರ್ಮದವರ ಮೇಲೆ ಕ್ರೌರ್ಯ ನಡೆಸುತ್ತಿದ್ದ. ಪರ್ಷಿಯನ್ ಪ್ರೇಮಿ ಟಿಪ್ಪು ಕನ್ನಡಕ್ಕೆ ದ್ರೋಹ ಬಗೆದಿದ್ದು ವಾಸ್ತವಾಂಶ.”
2024 ಹಾಗೂ 2029ರ ಲೋಕಸಭಾ ಚುನಾವಣೆಯಲ್ಲೂ
@narendramodi
ಹೆಚ್ಚೆಚ್ಚು ಬಹುಮತದಿಂದ ಗೆಲ್ಲಬೇಕು. ನಂತರ ನಿವೃತ್ತಿಗೊಳ್ಳಬೇಕು. ಅಲ್ಲಿಯವರೆಗೆ ಅವರಂತೆಯೇ ಇರುವವರನ್ನು ತಯಾರು ಮಾಡಬೇಕು. ದೇಶದಲ್ಲಿ ಮೋದಿ ಸರ್ಕಾರದಂತಹ ಸರ್ಕಾರ ಇದುವರೆಗೆ ಬಂದಿರಲಿಲ್ಲ. ಸೇವೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು, ಧೈರ್ಯ ಇರುವಂಥವರು ಇದುವರೆಗೆ ಬಂದಿರಲಿಲ್ಲ.
“ಮಲಬಾರಿನ ಮುಸ್ಲಿಮರು ಮಲೆಯಾಳಂ
ಭಾಷೆಯನ್ನು ತಮಿಳುನಾಡಿನ ಮುಸ್ಲಿಮರು ತಮಿಳನ್ನು ಇಂದಿಗೂ ಮಾತನಾಡುತ್ತಾರೆ; ಆದರೆ ಮೈಸೂರಿನ ಮುಸ್ಲಿಮರು ಇಂದಿಗೂ ಉರ್ದೂ ಮಾತನಾಡುವುದು ಕನ್ನಡದಲ್ಲಿ ಓದಿ ಬರೆಯದೆ ಇರುವುದು ಟಿಪ್ಪು ಆರಂಭಿಸಿದ ಫಾರ್ಸಿ ಮತ್ತು ಉರ್ದೂ ವಿದ್ಯಾಭ್ಯಾಸ ಪದ್ಧತಿಯಿಂದ.”
ಡಾ. ಎಸ್.ಎಲ್. ಭೈರಪ್ಪ
“ಮೋದಿ ಪ್ರಧಾನಿ ಆದ ಕಾರಣದಿಂದಲೇ ನನಗೆ ಪ್ರಶಸ್ತಿ ಬಂತು. ಮೋದಿ ಪ್ರಧಾನಿ ಆಗದಿದ್ದರೇ ನನಗೆ ಪ್ರಶಸ್ತಿ ಬರ್ತಿರಲಿಲ್ಲ. ಲೇಖಕ ಸತ್ತೇ ಸಾಯುತ್ತಾನೆ, ಆದ್ರೆ, ಅವನ ಪುಸ್ತಕ ಎಂದೂ ಜೀವಂತ. ಎಷ್ಟು ದಿನ ಪುಸ್ತಕ ಇರುತ್ತೋ ಅಲ್ಲಿವರೆಗೆ ಲೇಖಕ ಜೀವಂತ. ನಾನು ಬರೆದ ಕೃತಿಗಳಿಗೆ ಅಂತಹ ಶಕ್ತಿ ಇದ್ದರೆ ಸಂತೋಷ. ಭಾರತದ ಸಂಸ್ಕೃತಿ ನನ್ನ ಕಾದಂಬರಿಗಳ ಮೂಲ.”
“ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಅಗ್ರ ಸ್ಥಾನ ಪಡೆಯುತ್ತಾರೆ. ಅವರಿಗೆ ‘ಭಾರತ ರತ್ನ’ ಏಕೆ ಕೊಟ್ಟಿಲ್ಲ ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ನನ್ನ ಪ್ರಕಾರ ‘ಭಾರತ ರತ್ನ’ ಪ್ರಶಸ್ತಿ ಸಾವರ್ಕರ್ ಅವರಿಗೆ ದೊಡ್ಡದಲ್ಲ. ‘ಭಾರತ ರತ್ನ’ವನ್ನೂ ಅವರು ಮೀರಿದವರಾಗಿದ್ದಾರೆ.”
ಡಾ. ಎಸ್. ಎಲ್. ಭೈರಪ್ಪ
"ಅನಾಥ ಮಕ್ಕಳನ್ನು ತಮ್ಮ ಆಶ್ರಮಕ್ಕೆ ಸೇರಿಸಿಕೊಂಡು ಪೋಷಿಸಿದ ಮದರ್ ಥೆರೇಸಾ, ಆ ಮಕ್ಕಳನ್ನು ಅವರವರ ಮೂಲಧರ್ಮ ಅನುಸರಿಸಲು ಬಿಟ್ಟರೆ? ಇಲ್ಲ. ಅವರನ್ನೆಲ್ಲ ಕ್ರೈಸ್ತರನ್ನಾಗಿ ಮಾಡಿಯೇ ಇದ್ದಾರೆ. ಇದೊಂದು ಮತ ವಿಸ್ತರಣೆಯ ಹುನ್ನಾರವಲ್ಲವೇ? ಆಕೆಯನ್ನು ನಮ್ಮ ಮಾಧ್ಯಮಗಳು ಕೂಡ ಮುಗಿಲೆತ್ತರಕ್ಕೆ ಏರಿಸಲಿಲ್ಲವೇ ಎಂದು ಪ್ರಶ್ನಿಸಿರಿ.”
“ಸಾಹಿತಿಗಳ ವಲಯದಲ್ಲಿ ನಾನೊಬ್ಬನೇ ಏಕಾಂಗಿಯಾಗಿ
@narendramodi
ಅವರ ಪರ ನಿಂತೆ. ನಾನು ಕೆಲ ವರ್ಷ ಗುಜರಾತ್ನಲ್ಲಿ ಇದ್ದೆ. ಮೋದಿ ಆ ರಾಜ್ಯವನ್ನು ಬದಲಿಸಿದ ಬಗ್ಗೆ ನನಗೆ ಗೊತ್ತು. ಭಾರತದಲ್ಲಿ ಮೋದಿ ಸರ್ಕಾರದಂತಹ ಸರ್ಕಾರ ಇದುವರೆಗೆ ಬಂದಿರಲಿಲ್ಲ. ಇಂದು ನಮ್ಮ ದೇಶ ಮೋದಿಯವರ ಆಳ್ವಿಕೆಯಲ್ಲಿ ಪ್ರಗತಿ ಪಥದಲ್ಲಿ ಇದೆ.”
ಡಾ. ಎಸ್. ಎಲ್. ಭೈರಪ್ಪ
"ಮಲಬಾರಿನ ಮುಸ್ಲಿಮರು ಮಲೆಯಾಳಂ ಭಾಷೆಯನ್ನು, ತಮಿಳು ನಾಡಿನ ಮುಸ್ಲಿಮರು ತಮಿಳನ್ನು ಇಂದಿಗೂ ಮಾತನಾಡುತ್ತಾರೆ; ಆದರೆ ಮೈಸೂರಿನ ಮುಸ್ಲಿಮರು ಇಂದಿಗೂ ಉರ್ದು ಮಾತನಾಡುವುದು, ಕನ್ನಡದಲ್ಲಿ ಓದಿ ಬರೆಯದೆ ಇರುವುದು ಟಿಪ್ಪು ಆರಂಭಿಸಿದ ಫಾರ್ಸಿ ಮತ್ತು ಉರ್ದೂ ವಿದ್ಯಾಭ್ಯಾಸ ಪದ್ಧತಿಯಿಂದ."
ಆವರಣ
- ಡಾ॥ ಎಸ್. ಎಲ್. ಭೈರಪ್ಪ
"ಎಷ್ಟು ದಿನದ ಋಣಾನುಬಂಧವೋ ಅಷ್ಟೇ ದಿನ ಪ್ರತಿಯೊಬ್ಬರೂ ನಮ್ಮ ಜೊತೆ ಇರ್ತಾರೆ. ಅದು ಮುಗಿದಮೇಲೆ ದೂರ ಹೋಗ್ತಾರೆ. ಕೆಲವರು ಸತ್ತು ದೂರ ಹೋದರೆ, ಮತ್ತೆ ಕೆಲವರು ಬದುಕಿರುವಾಗಲೇ ದೂರ ಹೋಗ್ತಾರೆ. ಅದನ್ನ ನಾವು ಯಾವಾಗಲೂ ಸ್ವೀಕರಿಸಬೇಕು, ದುಃಖಿಸಬಾರದು."
ವಂಶವೃಕ್ಷ
- ಡಾ॥ ಎಸ್. ಎಲ್. ಭೈರಪ್ಪ
“ಸತ್ಯವನ್ನು ಮರೆಮಾಚುವ ಮಾಯೆಯ ಕಾರ್ಯಕ್ಕೆ ಆವರಣವೆಂದೂ, ಅಸತ್ಯವನ್ನು ಬಿಂಬಿಸುವ ಕಾರ್ಯಕ್ಕೆ ವಿಕ್ಷೇಪವೆಂದೂ ಹೆಸರು. ವ್ಯಕ್ತಿಯ ಮಟ್ಟದಲ್ಲಿ ನಡೆಯುವ ಈ ಕ್ರಿಯೆಯನ್ನು ಅವಿದ್ಯೆ ಎಂದು. ಸಮೂಹದ ಮತ್ತು ಜಗತ್ತಿನ ಮಟ್ಟದಲ್ಲಿ ನಡೆಯುವ ಈ ಕ್ರಿಯೆಯನ್ನು ಮಾಯೆ ಎಂದೂ ಕರೆಯುತ್ತಾರೆ.”
ಡಾ. ಎಸ್. ಎಲ್. ಭೈರಪ್ಪ
“ವೇದದ ಮಹಾ ಋಷಿಗಳೆಲ್ಲ ಗೃಹಸ್ಥರಾಗಿದ್ದರು. ಉತ್ತು-ಬಿತ್ತಿ ಅನ್ನ ಸಂಪಾದಿಸುತ್ತಿದ್ದರು. ಶಿಷ್ಯರನ್ನು ಸಾಕುತ್ತಿದ್ದರು. ಬಿಲ್ಲು-ಬಾಣ ಹಿಡಿದು ಯುದ್ಧವನ್ನು ಮಾಡುತ್ತಿದ್ದರು. ತಪಸ್ಸನ್ನೂ ಮಾಡುತ್ತಿದ್ದರು. ಬೌದ್ಧ ಸಂನ್ಯಾಸಿಗಳಂತೆ ತುತ್ತು ಕೂಳಿಗೆ ಸಮಾಜಕ್ಕೆ ಹೊರೆಯಾಗಿ ಇರಲಿಲ್ಲ. ಮಠ ಸಂನ್ಯಾಸವೆನ್ನುವುದು ಬೌದ್ಧಧರ್ಮ. ವೈದಿಕಧರ್ಮವಲ್ಲ.”
“ಸಾಹಿತಿಗಳ ವಲಯದಲ್ಲಿ ನಾನೊಬ್ಬನೇ ಏಕಾಂಗಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪರ ನಿಂತೆ. ನಾನು ಕೆಲ ವರ್ಷ ಗುಜರಾತ್ನಲ್ಲಿ ಇದ್ದೆ. ನನಗೆ ಅಲ್ಲಿನ ಜನರ ಬಗ್ಗೆ ಗೊತ್ತು. ಪ್ರಧಾನಿ ಮೋದಿ ಆ ರಾಜ್ಯವನ್ನು ಬದಲಿಸಿದ ಬಗ್ಗೆ ನನಗೆ ಗೊತ್ತು.”
“ಬುದ್ಧ ತನ್ನ ಶಿಷ್ಯರಿಗೆ ತಲೆಬೋಳಿಸಿ ಕಷಾಯ ಉಡಿಸಿ ಸನ್ಯಾಸ ದೀಕ್ಷೆ ಕೊಟ್ಟ. ದುಡಿದು ತಿನ್ನುವುದನ್ನು ತಪ್ಪಿಸಿ ಭಿಕ್ಷೆಯಿಂದ ಜೀವಿಸುವಂತೆ ಹೇಳಿ ಅವರನ್ನೆಲ್ಲ ಭಿಕ್ಕುಗಳೆಂದ. ಅವರು ಎಂಟೂ ದಿಕ್ಕುಗಳಿಗೆ ಹರಡಿ ಸಾವಿರಾರು ಸಂಸಾರಿಗಳನ್ನು ಭಿಕ್ಷುಕರನ್ನಾಗಿ ಮಾಡಿದರು. ಭಿಕ್ಷುಕರ ಸಂಖ್ಯೆ ಹೆಚ್ಚಿರುವ ನಾಡಿನಲ್ಲಿ ಸುಭಿಕ್ಷೆ ಎಲ್ಲಿ ಬರಬೇಕು?”
“ಹೆಂಡತಿಯನ್ನು ಪ್ರೀತಿಸುವುದು ಅವಳಿಂದ ಆಕರ್ಷಿತನಾಗಿರುವುದು ಪ್ರಕೃತಿ ಧರ್ಮ. ಅವಳೊಡನೆ ಸೌಜನ್ಯದಿಂದ ವರ್ತಿಸಿ ಸುಖವಾಗಿಟ್ಟಿರುವುದು ಮಾನವೀಯ ಧರ್ಮ. ಅದಕ್ಕಿಂತಲೂ ಮಿಗಿಲಾದ ಒಂದು ಧರ್ಮವಿದೆ. ಪತ್ನಿಯ ಬಗೆಗೆ ಭಕ್ತಿಭಾವವೂ ಬೇಕು. ಮನೆಗೆ ದೈವತ್ವದ ಕಳೆ ಕೊಡುವ ದೇವತೆಯೇ ಅವಳು. ಆದ್ದರಿಂದಲೇ ನಮ್ಮವರು ಅವಳನ್ನು ಗೃಹಲಕ್ಷ್ಮೀ ಅಂತ ಕರೆದದ್ದು.”
"ಔರಂಗಜೇಬ್ ಕಟ್ಟಾ ಇಸ್ಲಾಂ ಅನುಯಾಯಿಯಾಗಿದ್ದ. ಆತನ ಕ್ರೌರ್ಯವೂ ಅಷ್ಟೇ ಭೀಕರವಾಗಿತ್ತು. ಆದರೆ ಜವಾಹರಲಾಲ್ ನೆಹರೂ ಅವರು ಬರೆದ ‘ಡಿಸ್ಕವರಿ ಆಫ್ ಇಂಡಿಯಾ’ದಲ್ಲಿ ಆತನ ಕುರಿತು ಸಣ್ಣ ಟಿಪ್ಪಣಿ ನೀಡಿ, ಆತ ಒಳ್ಳೆಯ ಆಡಳಿತಗಾರ ಎಂದು ಹೇಳಿ ತೇಲಿಸಿದ್ದಾರೆ. ಹೀಗೆ ಇತಿಹಾಸವನ್ನು ತಪ್ಪಾಗಿ ತಿಳಿಸುವ ಅಗತ್ಯವೇನಿದೆ."
ಇಸ್ಲಾಂ ಪೂರ್ವದ ಅರಬರಲ್ಲಿ ಹಲವಾರು ಹೆಣ್ಣುದೇವತೆಗಳ ಪೂಜೆ ನಡೆಯುತ್ತಿತ್ತು. ಇಸ್ಲಾಮಿನಲ್ಲಿ ಹೆಣ್ಣುದೇವತೆಗೆ ಸ್ಥಾನವೇ ಇಲ್ಲ.
ಅಲ್ಲಾಹುವು ಗಂಡೇ ಯಾಕಾಗಿರಬೇಕು? ಹೆಣ್ಣು ಯಾಕಾಗಿರಬಾರದು? ಎಂಬ ಪ್ರಶ್ನೆಯನ್ನು ಕೇಳುವ ಧೈರ್ಯ ಯಾರಿಗಿದೆ?
ಸ್ತ್ರೀ ಸಮಾನತೆ ಅಂತ ಕೂಗು ಹಾಕುವ ಯಾವ ಭಾರತೀಯ ಮಹಿಳೆಯೂ ಯಾಕೆ ಈ ಅಂಶವನ್ನು ಕೇಳುವುದಿಲ್ಲ?
“ಇಡೀ ಭಾರತೀಯ ಸಾಹಿತ್ಯದಲ್ಲಿ ಕೃಷ್ಣನಂಥ ಸಂಕೀರ್ಣಪಾತ್ರ ಬೇರೊಂದಿಲ್ಲ. ರಾಮ ಸರಳವಾಗಿ ಅರ್ಥವಾಗುತ್ತಾನೆ. ಕೃಷ್ಣನಲ್ಲಿ ಗ್ರಹಿಕೆಗೆ ಮೀರಿದ ಯಾವುದಾದೊರೊಂದು ಮುಖ ಉಳಿಯುತ್ತದೆ. ಇಡೀ ಭಾರತದ ಸಮಗ್ರ ಕಲ್ಪನೆಯನ್ನು ಮೊಟ್ಟ ಮೊದಲ ಬಾರಿಗೆ ಬೆಳೆಸಿಕೊಂಡ ರಾಜನೀತಿಜ್ಞ ಅವನು. ತನ್ನ ಕಾಲಕ್ಕಿಂತ ಹಲವು ಶತಮಾನಗಳೋ ಸಹಸ್ರ ವರ್ಷಗಳೋ ಮುಂದಿನ ನೈತಿಕ ದೃಷ್ಟಿ
“ದೇವಾಲಯಗಳಿಂದಾಗಿ ನಮ್ಮ ಕಲೆ, ಸಂಗೀತ, ನರ್ತನ ಬೆಳೆದಿದೆ. ದೇವಾಲಯ ನನ್ನದಲ್ಲ ಎಂಬ ಭಾವನೆಯಿಂದ ಬಿಡಿಸಿಕೊಳ್ಳಲು ನನ್ನಿಂದ ಆಗುತ್ತಿಲ್ಲ. ಹಾಗಾಗಿಯೇ ಏನೋ, ಮುಸ್ಲಿಮರು 35 ಸಾವಿರ ದೇವಸ್ಥಾನಗಳನ್ನು ಹೊಡೆದುರುಳಿಸಿದರು ಎಂಬುದನ್ನು ನಾನು ಯಾವತ್ತೂ ಮರೆಯಲಾರೆ. ಇದೆಲ್ಲವೂ ಗೊತ್ತಿದ್ದೂ ನಾನು ಜಾತ್ಯತೀತ ರಾಜಕಾರಣಿಗಳಂತೆ ಹಿಪೋಕ್ರಿಟ್ ಆಗಲಾರೆ.”
“ಬ್ರಿಟಿಶರ ವಿರುದ್ಧ ಹೋರಾಡಿದವನೆಂಬ ಕಾರಣವನ್ನು ಮುಂದೆ ಮಾಡಿ ಟಿಪ್ಪುವನ್ನು ರಾಷ್ಟ್ರನಾಯಕನೆನ್ನಬಹುದಾದರೆ ಅದೇ ಬ್ರಿಟಿಶರ ವಿ��ುದ್ಧ ಹೋರಾಡಿದ ಮರಾಠರನ್ನೇಕೆ ಈ ಇತಿಹಾಸಕಾರರು-ಸಾಹಿತಿಗಳು ವೈಭವೀಕರಿಸುವುದಿಲ್ಲ? ತಮ್ಮ ವೈರಿಗಳಲ್ಲೆಲ್ಲ ಅತ್ಯಂತ ಬಲಶಾಲಿಗಳೆಂದರೆ ಮರಾಠರೆಂದು ಬ್ರಿಟಿಶರೇ ಗುರುತಿಸಿದ್ದರು.”
ಆವರಣ
- ಡಾ॥ ಎಸ್. ಎಲ್. ಭೈರಪ್ಪ
“ಕರ್ಣ ಇರುವತನಕ ಯುದ್ಧದ ಬಗ್ಗೆ ಇದ್ದ ಆತಂಕ ಈಗ ಇಲ್ಲ. ಕರ್ಣನಿಂದ ನನ್ನ ಉಳಿದ ಮಕ್ಕಳು ಸಾಯುತ್ತಾರೆಂದಲ್ಲ. ನನ್ನವೇ ಮಕ್ಕಳು ನನ್ನ ಇನ್ನೊಬ್ಬ ಮಗನೊಡನೆ ಕಾಯುತ್ತಾರೆ ಅಂತ.”
ಕುಂತಿ, ಪರ್ವ
ಡಾ. ಎಸ್. ಎಲ್. ಭೈರಪ್ಪ
“ವೀರ, ಶೂರ, ತಂತ್ರ, ತ್ಯಾಗ, ಯೋಗ, ಕರ್ಮ, ಶೃಂಗಾರ ಎಷ್ಟೊಂದು ಸಂಕೀರ್ಣ ವಾಹಿನಿಗಳ ಸೆಲೆ ಕೃಷ್ಣನು. ವೈರಾಗ್ಯವೊಂದೇ ಬುದ್ಧನ ಸ್ಥಾಯಿರಸ. ಒಂದು ದಿನ ನೀನು ಸಾಯುತ್ತೀಯ, ಆದ್ದರಿಂದ ಈಗಲೇ ವಿರಾಗಿಯಾಗು ಎಂಬ ಏಕತಾನತೆ. ಯುದ್ಧ ಮಾಡಲೇಬೇಕು, ಅದು ನಿನ್ನ ಕರ್ತವ್ಯ, ಎಂಬ ಮಾತು ಬುದ್ಧನ ಬಾಯಲ್ಲಿ ಬಂದೀತೆ?”
“ಜ್ಞಾನವಾಪಿ ಮಸೀದಿಯು ಆಕ್ರಾಮಕ ಅಹಂಕಾರದ ಪ್ರತೀಕವೆಂಬಂತೆ ಅಡರಿ ನಿಂತಿತ್ತು. ತನ್ನ ದಡದಲ್ಲಿ ಅಡರಿಕೊಂಡಿರುವ ಅದರ ಪರಿವೆಯೇ ಇಲ್ಲವೆಂಬಂತೆ ನದಿಯು ನಿಂತಿತ್ತು. ಗಂಗೆ ಸದ್ದು ಮಾಡುವ ನದಿಯಲ್ಲ, ನಿಶ್ಯಬ್ದವಾಗಿ ಒಳಗೇ ಚಲಿಸುವ ಸಂಸ್ಕೃತಿ.”
ಆವರಣ
ಡಾ. ಎಸ್. ಎಲ್. ಭೈರಪ್ಪ
ವಿಶ್ವೇಶ್ವರಯ್ಯನವರು ಹೊಟ್ಟೆಯ ಪಾಡಿಗಾಗಿ ನೌಕರಿ ಹುಡುಕಿಕೊಂಡು ಮೈಸೂರಿಗೆ ಬಂದವರಲ್ಲ. ಬ್ರಿಟಿಷರ ಅಧೀನದ ವಿಶಾಲವಾದ ಮುಂಬಯಿ ಪ್ರಾಂತದಲ್ಲಿ ಬ್ರಿಟಿಷ್ ಎಂಜಿನಿಯರುಗಳೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂಥ ಸಾಧನೆ ಮಾಡಿದಂತವರು.
ವಿಶ್ವೇಶ್ವರಯ್ಯನಂಥ ಯಂತ್ರಶಿಲ್ಪಿ, ಸಿವಿಲ್ ಎಂಜಿನಿಯರಿಂಗ್, ಆರ್ಥಿಕಾಭಿವೃದ್ಧಿ, ಶೈಕ್ಷಣಿಕ ಪ್ರಗತಿ ಮೊದಲಾದ
“ನಮ್ಮಲ್ಲಿ ಆದ ಮೊದಲ ತೊಂದರೆ ಏನಂದರೆ ಬೇರೆ ಧರ್ಮಗಳನ್ನು ನಾವು ಅಧ್ಯಯನ ಮಾಡಲಿಲ್ಲ. ಆದರೂ ಎಲ್ಲಾ ಧರ್ಮದ ಸಾರ ಒಂದೇ ಎಂದು ಹೇಳಿ ತಿರುಗಿದೆವು. ಇದಕ್ಕೆ ನಮ್ಮ ಧರ್ಮ ಗುರುಗಳೂ ಹೊರತಾಗಿಲ್ಲ. ಮೊದಲ ಬಾರಿಗೆ ‘A Comparative Study of Religions’ ಮಾಡಿದವರು ಸ್ವಾಮಿ ವಿವೇಕಾನಂದರು ಮತ್ತು ದಯಾನಂದ ಸರಸ್ವತಿಗಳು.”
ಡಾ. ಎಸ್.ಎಲ್. ಭೈರಪ್ಪ
“ನಮ್ಮಲ್ಲಿ ಆದ ಮೊದಲ ತೊಂದರೆ ಏನೆಂದರೆ ನಾವು ಬೇರೆ ಧರ್ಮಗಳ ಅಧ್ಯಯನ ಮಾಡಲಿಲ್ಲ. ಆದರೂ ಎಲ್ಲಾ ಧರ್ಮಗಳ ಸಾರ ಒಂದೇ ಎಂದು ಹೇಳಿ ತಿರುಗಿದೆವು. ಇದಕ್ಕೆ ನಮ್ಮ ಧರ್ಮ ಗುರುಗಳೂ ಹೊರತಾಗಿಲ್ಲ. ಮೊದಲ ಬಾರಿ Comparative Religion Study ಮಾಡಿದವರು ಸ್ವಾಮಿ ವಿವೇಕಾನಂದರು ಮತ್ತು ದಯಾನಂದ ಸರಸ್ವತಿಗಳು.”
ಡಾ. ಎಸ್. ಎಲ್. ಭೈರಪ್ಪ
After Rabindranath Tagore, Dr. S.L. Bhyrappa’s novels are among the most widely translated into multiple languages across India and globally. His literary work has inspired over 20 Ph.D. theses. His novel 'Aavarana,' released in 2007, sold out prior to its official launch.
“ಎಷ್ಟೇ ಸಂಪಾದನೆ ಮಾಡಿರಲಿ, ಎರಡು ಚಪಾತಿ, ಎರಡು ಹಿಡಿ ಅನ್ನಕ್ಕಿಂತ ಒಂದು ಸಲಕ್ಕೆ ಹೆಚ್ಚು ತಿನ್ನಕ್ಕೆ ಆಗಲ್ಲ, ಒಟ್ಟಿಗೆ ಎರಡು ಶರಟು ಹಾಕುಕ್ಕೆ ಆಗಲ್ಲ, ಒಂದೇ ಸಲ ಎರಡು ಕಾರಿನಲ್ಲಿ ಕೂರಕ್ಕೆ ಆಗಲ್ಲ ಅಂತ ಅರ್ಥಮಾಡಿಕೊಂಡರೆ ದುರಾಸೆ ತನಗೆ ತಾನೇ ಇಳಿದು ಹೋಗುತ್ತೆ.”
ಡಾ. ಎಸ್. ಎಲ್. ಭೈರಪ್ಪ
“ದೇಶದ ಬಹುತೇಕ ಭಾಷೆಗಳಿಗೆ ಸಂಸ್ಕೃತವೇ ಮಾತೃ ಭಾಷೆ. ಕನ್ನಡವೂ ಈ ಮಾತಿಗೆ ಹೊರತಲ್ಲ. ಸಾಹಿತ್ಯ ಪದಬಂಢಾರವಲ್ಲದೇ, ಆಧುನಿಕ ಜ್ಞಾನ ವಿಜ್ಞಾನದ ಶಾಖೆಗಳ ಪರಿಭಾಷೆಯೂ ಸಂಸ್ಕೃತದಿಂದ ಪ್ರಭಾವಿತ. ಸಂಸ್ಕೃತದ ಮಕ್ಕಳಾದ ಕನ್ನಡ ಮೊದಲಾದ ದೇಶ ಭಾಷೆಗಳು ಈಗ ಬಹು ಎತ್ತರಕ್ಕೆ ಬೆಳದಿವೆ. ತನ್ನ ತಾಯಿಯಾದ ಸಂಸ್ಕೃತ ಮಾತೆಯನ್ನು ಆರೈಕೆ ಮಾಡುತ್ತಿವೆ.”
ಸಮಾಜ ಸಾಮರಸ್ಯದಿಂದ ಕೂಡಿರಬೇಕು ಅಂದ್ರೆ ಸತ್ಯ ಗೊತ್ತಿರಬೇಕು. ಸತ್ಯ ಸಾಪೇಕ್ಷವಾದುದಲ್ಲ. ನಾನು ಅದಕ್ಕಾಗಿ ಶೋಧಿಸಿದ್ದೇನೆ. ಆವರಣ ಕಾದಂಬರಿಗಾಗಿ ಒಟ್ಟು 136 ಆಕರ ಗ್ರಂಥಗಳನ್ನು ಪರಾಮರ್ಶಿಸಿದ್ದೇನೆ. ಹಾಗೆ ನೋಡಿದರೆ, ಲೇಖಕ ಪರಿಣಾಮವನ್ನು ಆಲೋಚಿಸಿ ಬರೆಯಬಾರದು. ಆತ ಸತ್ಯವನ್ನು ಹೇಳಬೇಕು. ಅದನ್ನು ಸಮಾಜ ಜೀರ್ಣಿಸಿಕೊಳ್ಳಬೇಕು.
ಇದಾದ ಬಳಿಕ
“ಆವರಣ ಕಾದಂಬರಿಯ ಬಗ್ಗೆ ಒಂದು ಗುಂಪಿನ ವಿಮರ್ಶಕರು ಇದರ ಅಗತ್ಯ ಏನಿತ್ತು? ಇದು ಸಮಾಜ ಒಡೆಯುತ್ತೆ…ಅಂತೆಲ್ಲಾ ಹೇಳಿದರೆ ವಿನಹ, ನಾನು ಬರೆದಿರುವುದು ಸುಳ್ಳು? ನನ್ನ ಆಧಾರಗಳು ಸುಳ್ಳು? ಈ ಬಗ್ಗೆ ಯಾರೂ ಮಾತಾಡಲಿಲ್ಲ.”
ಡಾ. ಎಸ್.ಎಲ್. ಭೈರಪ್ಪ
“ಕಾಮತೃಪ್ತಿಗೆ ಬೇರೆ ಉಪಾಯವಿದ್ದರೆ, ಯಾವ ಗಂಡು-ಹೆಣ್ಣು ಬೇಕಾದರೂ ಪರಸ್ಪರ ಸಮ್ಮತಿಸಿ ಬೇಕಾದಾಗ ಕಾಮವನ್ನು ತಣಿಸಬಹುದು ಅನ್ನುವ ಸ್ವಾತಂತ್ರ್ಯವಿದ್ದರೆ, ಯಾರು ಹೋಗಿ ಬೀಳ್ತಾರೆ ಮದುವೆ ಎಂಬ ಬಲೆಯೊಳಕ್ಕೆ?”
“ಆಹಾರದಲ್ಲೂ ಅಹಿಂಸೆ ಅನ್ನುವುದು ಇರೋದು ಜೈನರಲ್ಲಿ. ಅದು ಬ್ರಾಹ್ಮಣರಿಗೂ ಬಂತು. ಮೊದಲು ಬ್ರಾಹ್ಮಣರೂ ಮಾಂಸ ತಿಂತಾ ಇದ್ದರು. ಉತ್ತರ ಭಾರತದಲ್ಲಿ ಈಗಲೂ ಮಾಂಸ ತಿನ್ನುವ ಬ್ರಾಹ್ಮಣರಿದ್ದಾರೆ. ಜೈನರ ಆಹಾರ ಪದ್ಧತಿಯ ಪ್ರಭಾವ ಬ್ರಾಹ್ಮಣರ ಮೇಲಾಗಿದೆ ಅಷ್ಟೇ. ಆಹಾರ ಸಂಸ್ಕೃತಿ ಅಂತೆಲ್ಲ ಬಳಸೋ ಪದ ಎಲ್ಲ Miss use of words.”
ಎಸ್. ಎಲ್. ಭೈರಪ್ಪ
ಮೂಸೀ ನದಿಯ ಪ್ರವಾಹ ಉಕ್ಕಿ ಹೈದರಾಬಾದ್ ಮತ್ತು ಸಿಕಂದರಾಬಾದ್ ನಗರಗಳು ನೀರಿನಿಂದ ಆವೃತವಾದಾಗ ನಿಜಾಮರು ಮದರಾಸು ಪ್ರಾಂತದ ಯುರೋಪಿಯನ್ ಎಂಜಿನಿಯರುಗಳ ಸಹಾಯವನ್ನು ಕೇಳಿದರು.
ಅವರೆಲ್ಲ ಏಕಕಂಠದಿಂದ ‘ಈ ಕೆಲಸಕ್ಕೆ ಮುಂಬಯಿ ಪ್ರಾಂತದ ವಿಶ್ವೇಶ್ವರಯ್ಯನವರೊಬ್ಬರೇ ಸಮರ್ಥರು. ನಾವು ಯಾರೂ ಅಲ್ಲ’ ಎಂದರು. ಅನಂತರ ನಿಜಾಮರು ವಿಶ್ವೇಶ್ವರಯ್ಯನವರನ್ನು
“ರಾಮಾಯಣ, ಮಹಾಭಾರತಗಳ ಒಂದು ಸ್ಥೂಲ ಕಥೆ ನಡೆದಿರುವುದು ನಿಜ. ಅದನ್ನು ಬರೆದವರು ಪಾತ್ರಗಳಿಗೆ ಪೌರಾಣಿಕ ಆಯಾಮವನ್ನು, ಅತಿ ಮಾನುಷತೆಯನ್ನು ಆರೋಪಿಸಿದರು. ರಾಮಾಯಣ–ಮಹಾಭಾರತವನ್ನು ಬದುಕನ್ನು ಅರ್ಥ ಮಾಡಿಕೊಳ್ಳುವ ದೃಷ್ಟಿಯಿಂದ ಓದಬೇಕು. ದೈವ ನಂಬಿಕೆಯಿಂದ ಮಹಾಭಾರತ–ರಾಮಾಯಣ ಓದಬೇಕೆನ್ನುವುದು ತಪ್ಪುಕಲ್ಪನೆ.”
"ಮಲಬಾರ್ ಮತ್ತು ಕೊಡಗುಗಳಲ್ಲಿ ಹಿಂದೂಗಳನ್ನು ಬಲವಂತವಾಗಿ ಮತಾಂತರಿಸಿದ ಟಿಪ್ಪು ಮೈಸೂರು ಪ್ರಾಂತ್ಯದಲ್ಲಿ ಆ ದುಸ್ಸಾಹಸಕ್ಕೆ ಹೋಗಲಿಲ್ಲ. 1791 ರಲ್ಲಿ ಮೂರನೆಯ ಮೈಸೂರು ಯುದ್ಧದಲ್ಲಿ ಸೋತ ನಂತರ ಬ್ರಿಟಿಶರಿಗೆ ದೊಡ್ಡ ಮೊತ್ತದ ಸಂಪತ್ತನ್ನೂ ರಾಜ್ಯದ ಮುಖ್ಯಭಾಗಗಳನ್ನೂ ಒಪ್ಪಿಸಿ, ಇಬ್ಬರು ಮಕ್ಕಳನ್ನೂ ಯುದ್ಧಬಂದಿಯಾಗಿ ಕೊಟ್ಟ."
“ನಮ್ಮದೇಶದ ಭಾಷೆಗಳ ಶಬ್ದಕೋಶ ಮಾತ್ರವಲ್ಲ, ವ್ಯಾಕರಣ ಪ್ರಕ್ರಿಯೆಯೂ ಸಂಸ್ಕೃತದ ವ್ಯಾಕರಣವನ್ನೆ ಆಶ್ರಯಿಸಿದೆ. ಕನ್ನಡ ಶಬ್ದಕೋಶದ ಶೇ.65ರಷ್ಟು ಶಬ್ದಗಳು ಸಂಸ್ಕೃತದಿಂದಲೇ ಬಂದಿವೆ. ದೇಶ ಭಾಷೆಗಳ ಸಾಹಿತ್ಯ ಸಮೃದ್ಧಿಗೆ ಸಂಸ್ಕೃತ ಕಾರಣವಾದರೆ, ಸಂಸ್ಕೃತ ಭಾಷೆಯ ಸಂವರ್ಧನೆ ದೇಶ ಭಾಷೆಗಳಿಂದ ಅನುವಾದಿತವಾಗಿರುವ ಸಾಹಿತ್ಯ ಕೊಡುಗೆಯಿಂದ ಸಮೃದ್ಧವಾಗಿದೆ.”
“ಇಡೀ ಭಾರತೀಯ ಸಾಹಿತ್ಯದಲ್ಲಿ ಕೃಷ್ಣನಂಥ ಸಂಕೀರ್ಣಪಾತ್ರ ಬೇರೊಂದಿಲ್ಲ. ರಾಮ ಸರಳವಾಗಿ ಅರ್ಥವಾಗುತ್ತಾನೆ. ಕೃಷ್ಣನಲ್ಲಿ ಗ್ರಹಿಕೆಗೆ ಮೀರಿದ ಯಾವುದಾದೊರೊಂದು ಮುಖ ಉಳಿಯುತ್ತದೆ. ಇಡೀ ಭಾರತದ ಸಮಗ್ರ ಕಲ್ಪನೆಯನ್ನು ಮೊಟ್ಟ ಮೊದಲ ಬಾರಿಗೆ ಬೆಳೆಸಿಕೊಂಡ ರಾಜನೀತಿಜ್ಞ ಅವನು. ಹಲವು ಶತಮಾನಗಳೋ ಸಹಸ್ರ ವರ್ಷಗಳೋ ಮುಂದಿನ ನೈತಿಕ ದೃಷ್ಟಿ ಇದ್ದವನು ಅವನು.”
ಭಾರತೀಯರ ವಿಗ್ರಹಾರಾಧನೆಯನ್ನು ಸೆಮೆಟಿಕ್ ಮತಗಳು ಕೆಟ್ಟದೆಂಬಂತೆ ಚಿತ್ರಿಸುತ್ತದೆ.
ಕ್ರೈಸ್ತ ಮತವೂ ವಿಗ್ರಹಾರಾಧಕವೇ. ಚರ್ಚಿನಲ್ಲಿರುವ ಏಸುವಿನ ಚಿತ್ರ, ಶಿಲ್ಪ , ಶಿಲುಬೆಯ ಚಿಹ್ನೆಗಳು ವಿಗ್ರಹವಲ್ಲದೆ ಮತ್ತೇನು?
ಇಸ್ಲಾಮಿನ ಚಂದ್ರ ಮತ್ತು ನಕ್ಷತ್ರದ ಗುರುತು ವಿಗ್ರಹವಲ್ಲವೆ?
ದೇವರನ್ನು ಭಾಷೆಯಿಂದ ವರ್ಣಿಸಿದ ತಕ್ಷಣ ಅದು ಸಗುಣವಾಗುತ್ತದೆ.
“ಹಲವು ವರ್ಷಗಳ ಹಿಂದೆ ನಾನು ನನ್ನ ಹಳ್ಳಿ ಮತ್ತು ಸುತ್ತಣ ಹಳ್ಳಿಗಳಲ್ಲಿ ಕಣ್ಣಾರೆ ನೋಡುತ್ತಿದ್ದ ಸಂಗತಿ: ಒಂದು ಬಸವನ ಮೇಲೆ ಕಟ್ಟಿದ ನಗಾರಿಯ ಸದ್ದು. ಅದನ್ನು ಕೇಳುತ್ತಿದ್ದ ಗ್ರಾಮಸ್ಥರು “ಸಿದ್ಧಗಂಗೆ ಸ್ವಾಮಿಗಳು ಭಿಕ್ಷಕ್ಕೆ ಬಂದವರೆ” ಎಂದು ಮನೆಯಿಂದ ಹೊರಗೆ ಬರುತ್ತಿದ್ದರು. ಶಿವಕುಮಾರಸ್ವಾಮಿಗಳಿಗೆ ಆಗ ನಲವತ್ತರ ಪ್ರಾಯ.”
ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ಹಿಂದೂ ಮುಸ್ಲಿಮರನ್ನು ಒಡೆದು ಆಳಿದರು. ನೀವು ನಮ್ಮಿಂದ ದೂರವಾದರೆ ಹಿಂದೂಗಳು ನಿಮ್ಮನ್ನು ತುಳಿಯುತ್ತಾರೆ. ನಾವು ನಿಮ್ಮ ರಕ್ಷಣೆಗೆ ಇದ್ದೇವೆ ಎಂದು ಮುಸ್ಲಿಮರನ್ನು ಭಯದಲ್ಲಿಟ್ಟರು. ಸ್ವಾತಂತ್ರ್ಯ ಬಳಿಕ ಕೆಲವು ಪಕ್ಷಗಳು ಈ ಕೆಲಸವನ್ನು ಮುಂದುವರೆಸಿದವು.
ಅಂತೆಯೇ, ಹಿಂದೂಗಳಲ್ಲಿಯೂ ಹಿಂದುಳಿದವರು ಹಾಗೂ
“ಹಲವು ವರ್ಷಗಳ ಹಿಂದೆ ನಾನು ನನ್ನ ಹಳ್ಳಿ ಮತ್ತು ಸುತ್ತಣ ಹಳ್ಳಿಗಳಲ್ಲಿ ಕಣ್ಣಾರೆ ನೋಡುತ್ತಿದ್ದ ಸಂಗತಿ: ಒಂದು ಬಸವನ ಮೇಲೆ ಕಟ್ಟಿದ ನಗಾರಿಯ ಸದ್ದು. ಅದನ್ನು ಕೇಳುತ್ತಿದ್ದ ಗ್ರಾಮಸ್ಥರು “ಸಿದ್ಧಗಂಗೆ ಸ್ವಾಮಿಗಳು ಭಿಕ್ಷಕ್ಕೆ ಬಂದವರೆ” ಎಂದು ಮನೆಯಿಂದ ಹೊರಗೆ ಬರುತ್ತಿದ್ದರು. ಶಿವಕುಮಾರಸ್ವಾಮಿಗಳಿಗೆ ಆಗ ನಲವತ್ತರ ಪ್ರಾಯ.”
“ನಮ್ಮ ಸಾವು ನಮ್ಮ ಕೈಲಿದೆ, ಇಚ್ಛಾಶಕ್ತಿ ಇದ್ದರೆ. ನಿರೀಕ್ಷೆಯಲ್ಲಾದರೂ ಅದನ್ನು ಅನುಭವಿಸಬಹುದು, ಅರಿಯಬಹುದು. ಹುಟ್ಟನ್ನು ಎಂದೂ ಅನುಭವಿಸಲಾರೆವು, ತಿಳಿಯಲಾರೆವು. ಸಾವೆಂದರೆ ಏನೂ ಇಲ್ಲದ ಶೂನ್ಯವಲ್ಲ. ಅದೇ ನಿಜವಾಗಿ ಅನುಭವಕ್ಕೆ ಸಿಗಬಹುದಾದ ಸಂಗತಿ. ಹುಟ್ಟೆಂಬುದು ಅನುಭವಕ್ಕೆ ಸಿಗದ ಖಾಲಿ ಕಲ್ಪನೆ.”
ನೆಲೆ
- ಡಾ॥ ಎಸ್. ಎಲ್. ಭೈರಪ್ಪ
“ವಿಶ್ವೇಶ್ವರಯ್ಯನವರು ಯಾವ ದಿವಾನರೂ ಒಟ್ಟು ಸೇರಿ ಮಾಡಿರದಷ್ಟು ಅಭಿವೃದ್ಧಿಯನ್ನು ತಾವು ದಿವಾನರಾಗಿದ್ದ ಕೇವಲ 6 ವರ್ಷಗಳಲ್ಲಿ ಮಾಡಿ ತಮ್ಮ ಜೀವಮಾನದಲ್ಲೇ ದಂತಕಥೆಯಾಗಿಬಿಟ್ಟರು. ದಿವಾನಗಿರಿಯನ್ನು ಬಿಟ್ಟ ನಂತರವೂ ತಾವು ಆರಂಭಿಸಿದ್ದ ಕನ್ನಂಬಾಡಿಯನ್ನು ಪೂರ್ಣಗೊಳಿಸಿದ್ದಲ್ಲದೆ, ಸಂಸ್ಥಾನಕ್ಕೆ ಮಾಡಿದ ಯಾವ ಸೇವೆಗೂ ಒಂದು ಬಿಡಿಗಾಸು ಮುಟ್ಟಲಿಲ್ಲ.”
“ಜೀವನದಲ್ಲಿ ನಿರಾಶರಾದವರು ಸಾಮಾನ್ಯವಾಗಿ ಮದ್ಯಪಾನದಲ್ಲಿ ಮರೆಯುತ್ತಾರಂತೆ. ಅದರ ಬದಲು ಅವರು ಕುಳಿತು ಯಾಕೆ ಓದಬಾರದು? ಸುರಾದೇವಿ, ಸರಸ್ವತಿ, ಇಬ್ಬರಲ್ಲಿಯೂ ಒಂದೇ ಗುಣವಿದೆ: ನಮಗೆ ಮರೆಯುವ ಶಕ್ತಿ ಕೊಡುವುದು.”
ದೂರ ಸರಿದರು
ಡಾ. ಎಸ್.ಎಲ್. ಭೈರಪ್ಪ
“ಕಲೆಗಿಂತ ಸತ್ಯ ದೊಡ್ಡದು. ಕಲಾವಿದನ ಸೃಷ್ಟಿ ಸತ್ಯದ ಅಭಿವ್ಯಕ್ತಿಯಾಗಿರಬೇಕು. ಕಲೆಯನ್ನ ಬೇರೆ ಯಾವ ಉದ್ದೇಶಕ್ಕೆ ��ುಡಿಸಿಕೊಳ್ಳುವುದೂ ಕಲೆಗೆ ಎಸಗುವ ದ್ರೋಹ.”
ಆವರಣ
- ಡಾ॥ ಎಸ್. ಎಲ್. ಭೈರಪ್ಪ
“ಇದಕ್ಕೆ ಪ್ರತಿಯಾಗಿ ಸಿದ್ಧಗಂಗಾ ಮಠದಲ್ಲಿ ಜಾತಿ-ಮತ ಕೇಳದೆ ಎಲ್ಲ ಮಕ್ಕಳಿಗೆ ಊಟ, ವಿದ್ಯೆ ಕೊಟ್ಟರೂ ಲಿಂಗಧಾರಣೆ ಮಾಡಲಿಲ್ಲ. 'ಅವರವರ ಜಾತಿ ಆಚರಣೆಗಳು ಅವರವರದ್ದು; ಉತ್ತಮ ನಡತೆ ಕಲಿಸುವುದಷ್ಟೇ ನಮ್ಮ ಕರ್ತವ್ಯ' ಎಂಬ ನಿಯಮ ಇಟ್ಟುಕೊಂಡು ನಡೆಸುತ್ತಿದ್ದಾರೆ. ಅವರಿಗೆ ಹಾಗೂ ಅಂತಹ ಇತರ ಕೆಲವರಿಗೆ ಮದರ್ ಥೆರೇಸಾಗೆ ಸಿಕ್ಕಿದ ಗೌರವ ಸಿಗಲಿಲ್ಲ.”
“ಲೇಖಕನಾದವನು ಹೆಚ್ಚು ಮಾತನಾಡ ಬಾರದು. ಅವನ ಕೆಲಸ ಬರೆಯುವುದೇ ಹೊರತು ಮಾತನಾಡುವುದಲ್ಲ. ಅವನ ಕೃತಿಗಳನ್ನು ಓದಿದ ಮಂದಿ ಮಾತನಾಡಬೇಕು. ನಮ್ಮಲ್ಲಿ ಬಹುತೇಕ ಸಾಹಿತಿಗಳು ಮಾತಲ್ಲಿ ಸಮಯ ಕಳೆಯುತ್ತಾರೆ. ಏನನ್ನೂ ಬರೆಯುವುದಿಲ್ಲ.”
ಡಾ. ಎಸ್. ಎಲ್. ಭೈರಪ್ಪ
“ನಮ್ಮ ತರುಣ ಪೀಳಿಗೆಯನ್ನು ಆವರಿಸಿರುವ ಸ್ವಾಭಿಮಾನ ಶೂನ್ಯತೆ, ಸ್ವಸಂಸ್ಕೃತಿಯ ಬಗೆಗೆ ಇರುವ ಉದಾಸೀನ ಮನೋಭಾವಗಳಿಗೆ ನಮ್ಮ ವಿದ್ಯಾಭ್ಯಾಸದ ಚೌಕಟ್ಟೂ ಬಹುಮಟ್ಟಿನ ಕಾರಣವಾಗಿದೆ.”
ಡಾ. ಎಸ್. ಎಲ್. ಭೈರಪ್ಪ
“ಎಲ್ಲಾ ನಮ್ಮಿಷ್ಟದಂತೆ ನಡೆದರೆ ಅದನ್ನ ಪ್ರಪಂಚ ಅಂತ ಯಾಕೆ ಕರಿತಾರೆ? ನನ್ನ ಹೆಂಡತಿ ಬದುಕಿದ್ದರೆ ಚೆನ್ನಾಗಿತ್ತು, ನನ್ನ ಮಗ ಬದುಕಿದ್ದರೆ ಇನ್ನೂ ಚೆನ್ನಾಗಿತ್ತು, ನಮ್ಮ ತಂದೆ-ತಾಯಿ ಬದುಕಿದ್ದರೆ ಮತ್ತೂ ಚನ್ನಾಗಿತ್ತೂ. ಆದರೆ ಎಷ್ಟು ದಿನದ ಋಣಾನುಬಂಧವೊ ಅಷ್ಟೇ ದಿನ ಪ್ರತಿಯೊಬ್ಬರೂ ನಮ್ಮ ಜೊತೆ ಇರ್ತಾರೆ. ಅದು ಮುಗಿದ ಮೇಲೆ ದೂರ ಹೋಗ್ತಾರೆ.”
“ತಾತಾ ಮಾಡಿದ ಆಸ್ತೀಲಿ ನಾವು ಹಕ್ಕು ಕೇಳ್ತೀವಿ. ಮುತ್ತಾತ ಮಾಡಿದ ಪುಣ್ಯ ನಮ್ಮನ್ನು ಕಾಪಾಡಬೇಕು ಅಂತ ಪ್ರಾರ್ಥನೆ ಮಾಡ್ತೀವಿ. ಆದರೆ ಅವರು ಮಾಡಿದ ಪಾಪದ ಫಲ ಅನುಭವಿಸು ಎಂದಾಗ ನಾನು ಜವಾಬ್ದಾರನಲ್ಲ ಅಂತೀವಿ. ಇದು ನೈತಿಕ ಪಲಾಯನವಲ್ಲವೇ?”
ಡಾ. ಎಸ್. ಎಲ್. ಭೈರಪ್ಪ
“ಹಿಂದಿನವರು ಮಾಡಿದ ತಪ್ಪುಗಳಿಗೆ ಇಂದಿನವರು ಜವಾಬ್ದಾರರಲ್ಲ. ಹಿಂದಿನವರೊಡನೆ ತಮ್ಮನ್ನು ತಾವು ಸಮೀಕರಿಸಿಕೊಂಡು ತಾವು ಅವರ ವಾರಸುದಾರರೆಂಬ ರಾಗಕ್ಕೆ ಸಿಕ್ಕಿಕೊಂಡರೆ ಹಿಂದಿನವರ ತಪ್ಪಿನ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ.”
- ಡಾ॥ ಎಸ್.ಎಲ್. ಭೈರಪ್ಪ