ಜಾತ್ರೆಯಲ್ಲಿ ರಥದ ಕಳಸಕ್ಕೆ ಗುರಿ ಇಟ್ಟು ಭಕ್ತಿಯಿಂದ ಬಾಳೆಹಣ್ಣು ಎಸೆಯುಯುವುದು ಕರ್ನಾಟಕದ ವಿವಿಧ ಭಾಗಗಳ ಜಾತ್ರೆಯ ರಥೋತ್ಸವಗಳ ಪದ್ದತಿ. ವಿಡಿಯೋದಲ್ಲಿ ಹಿರಿಯ ನಾಗರೀಕರೊಬ್ಬರು ಯುವಕರನ್ನು ನಾಚಿಸುವಂತೆ ಬಾಳೆಗಣ್ಣನ್ನು ಕಳಸಕ್ಕೆ ಹೊಡೆತ್ತಿರುವುದನ್ನು ಕಾಣಬಹುದು.
ಒಬ್ಬ ವಿದ್ಯಾರ್ಥಿಗೆ ಶಿಸ್ತು, ಸಂಯಮ, ಪರಿಶ್ರಮ, ಸಮಯಪ್ರಜ್ಞೆ, ಸ್ವಚ್ಚತೆ ಅತಿಮುಖ್ಯ! ಅವುಗಳಿದ್ದಾಗ ಮಾತ್ರ ಸುತ್ತಮುತ್ತಲಿನ ಆಕರ್ಷಣೆಗಳಿಗೆ ಒಳಗಾಗದೆ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯ. ವಿದ್ಯಾರ್ಥಿಯೊಬ್ಬ ತಾನು ಓದುವ ಗುಡಿಸಲನ್ನು ಎಷ್ಟು ಸ್ವಚ್ಚವಾಗಿ ಇಟ್ಟುಕೊಂಡಿದ್ದಾನೆ ನೋಡಿ.
ದುಡಿಮೆ ದುಡ್ಡಿನ ತಾಯಿ!!
ಕೆಲವರಿಗೆ ಮಳೆಯಲ್ಲಿಯೇ ಹೆಚ್ವು ದುಡಿಮೆ; ಅಂತ ದುಡಿಮೆಗಳಲ್ಲಿ ಸ್ವಿಗ್ಗಿ, ಜೊಮಟೋತರಹ ದಮನೆಮನೆಗಳಿಗೆ ಆಹಾರ ಒದಗಿಸುವ ಕಂಪನಿಗಳ ಕೆಲಸ ಒಂದು! ಗೌರವಕ್ಕೆ ಅನರ್ಹರಾದ ಹಲವು ಭ್ರಷ್ಟ, ಅಕ್ರಮ ಜನರ ನಡುವೆ ಹೀಗೆ ಕಠಿಣ ದುಡಿಮೆ ಮಾಡುತ್ತಿರುವ ಎಲ್ಲಾ ಶ್ರಮಿಕ ವರ್ಗ ಅತ್ಯಂತ ಗೌರವಾರ್ಹ ಸಮುದಾಯ ಎನ್ನಬಹುದು.
ಮಾದರಿ ಆಸ್ವತ್ರೆ ಮತ್ತು ಮಾದರಿ ಡಾಕ್ಟರ್!!
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ 'ಹೊನ್ನಾವರ' ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಯಾವುದೇ ಖಾಸಗಿ ಆಸ್ವತ್ರೆಗಿಂತ ಅತ್ಯಂತ ಸ್ವಚ್ಚವಾಗಿ ಅತ್ಯಂತ ವ್ಯವಸ್ಥಿತವಾಗಿದ್ದು, ಪ್ರಾಮಾಣಿಕತೆ, ದಕ್ಷತೆಯಿಂದ ಕೆಲಸ ಮಾಡಿದರೆ ಎಂತಹ ಅದ್ಬುತ ಬದಲಾವಣೆ ತರಬಹುದು ಎನ್ನುವುದಕ್ಕೆಆಸ್ವತ್ರೆ ಒಂದು ಉದಾಹರಣೆ.
ಸಂಗೀತ ನಿರ್ದೇಶಕ ಧುಮಾಲ್ ರವರು ಮರಾಠಿ ಸಿನಿಮಾ ಒಂದಕ್ಕೆ ಲೋನಾವಾಲಾ, ಅರ್ನಾಲಾ, ತ್ರ್ಯಂಬಕೇಶ್ವರ ಮತ್ತು ಸತಾರಾ ಕಾಡುಗಳ ಮೂಲಕ 1800 ಕಿ.ಮೀ ಅಲೆದಾಡಿ, ಸುಮಾರು 25 ಜಿಬಿ ಡೇಟಾ ಸಂಗ್ರಹಿಸಿ, ಎಡಿಟ್ ಮಾಡಿ ಈ ಹಕ್ಕಿಹಾಡು ಸಿದ್ಧಪಡಿಸಿದ್ದಾರೆ. ಇದು ಯಾವುದೇ ವಾದ್ಯದ ಸಂಗೀತವನ್ನು ಹೊಂದಿಲ್ಲ ಮತ್ತು 100% ಸಹಜವಾಗಿದೆ.
ತನ್ನ ಪಾಡಿಗೆ ತಾನು ಟ್ರಾಕ್ಟರ್ ನಲ್ಲಿ ಉಳುಮೆಯ ದುಡಿಮೆ ಮಾಡುತ್ತಿರುವ ಕಾಡಂಚಿನ ರೈತ;
ತನ್ನ ಪಾಡಿಗೆ ತಾನು ತನ್ನ ಕಾಡ ಹಾದಿ ಹಿಡಿದು ಶಾಂತ, ಗಾಂಭೀರ್ಯದ ನಡಿಗೆ ಹಾಕುತ್ತಿರುವ ಹುಲಿರಾಯ!!
ಕೇರಳದ ಕಾರ್ಯಕ್ರಮವೊಂದರಲ್ಲಿ ಅಲ್ಲಿನ ಕನ್ನಡದ ವಿದ್ಯಾರ್ಥಿಯೊಬ್ಬಳು ಹಳಗನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರಾದ ಕವಿ ರಾಘವಾಂಕನ 'ಹರಿಶ್ಚಂದ್ರ ಕಾವ್ಯ'ದ ಪದ್ಯದ ಸಾಲುಗಳನ್ನು ಅದ್ಬುತವಾಗಿ ವಾಚಿಸಿದ್ದಾರೆ. ಆಸಕ್ತರು ಕೇಳಿ.
~ ಪರಿಸರ ಪರಿವಾರ
#parisaraparivara
#KannadaSahitya
#ಕನ್ನಡಸಾಹಿತ್ಯ #ಹರಿಶ್ಚಂದ್ರಕಾವ್ಯ #ಹಳಗನ್ನಡ
ವನ್ಯಜೀವಿಗಳನ್ನು ಬೇಟೆಯಾಡಿದಾಗ, ಅಪಘಾತ ಸೇರಿ ಇತರ ಯಾವುದೇ ಕಾರಣದಿಂದ ಸಾಯಿಸಿದಾಗ, ಸತ್ತ ಜೀವಿ ಗರ್ಭಿಣಿಯಾಗಿರಬಹುದು ಅಥವಾ ಹಾಲುಣಿಸುವ ತಾಯಿಯಾಗಿರಬಹುದು. ಇಂತಹ ಜೀವಿಗಳು ಸತ್ತರೆ ಆ ತಾಯಿಯನ್ನು ಅವಲಂಬಿಸಿದ ಪುಟ್ಟ ಮರಿಗಳು ತಬ್ಬಲಿಯಾಗಿ ಹಸಿವಿನಿಂದ ಸಾಯುವುದು ನಿಶ್ಚಿತ.
~ ಪರಿಸರ ಪರಿವಾರ
#wildlife
ಸಂಗೀತ ನಿರ್ದೇಶಕ ಧನಂಜಯ್ ಧುಮಾಲ್ ರವರು ಲೋನಾವಾಲಾ, ಅರ್ನಾಲಾ, ತ್ರ್ಯಂಬಕೇಶ್ವರ ಮತ್ತು ಸತಾರಾ ಕಾಡಿನಲ್ಲಿ 1800 ಕಿಲೋಮೀಟರ್ ಪ್ರಯಾಣಿಸಿ, 25 ಜಿಬಿ ಡೇಟಾ ಸಂಗ್ರಹಿಸಿ, ಕ್ರೋಡೀಕರಿಸಿ ಮಾಡಿರುವ ವಿವಿಧ ಪಕ್ಷಿಗಳ ಕೂಗಿನ ಸಂಕಲನ ಅದ್ಬುತ ಸಂಗೀತ ವಾಗಿದೆ. ಒಮ್ಮೆ ಕೇಳಿ ಆನಂದಿಸಿ.
~ ಪರಿಸರ ಪರಿವಾರ
#parisaraparivara
#wildlife
ಪ್ರಕೃತಿಯ ನಿಯಮ!!
IIT ಮದ್ರಾಸ್ ಕ್ಯಾಂಪಸ್ನಲ್ಲಿ ಕೋತಿಗಳು ಮರದ ಎಲೆಗಳನ್ನು ಜಿಂಕೆಗಳಿಗೆ ತಿನ್ನಲು ಅನುವಾಗುವಂತೆ ಕೊಡುತ್ತಿರುವ ದೃಶ್ಯ; ಪ್ರಾಣಿ ಪ್ರಪಂಚದ ಅನ್ಯೋನ್ಯತೆ, ಪರಸ್ವರ ಸಹಕಾರ, ಸಹಬಾಳ್ವೆಗೆ ಪ್ರತ್ಯಕ್ಷ ಪ್ರತಿರೂಪಕದಂತಿದೆ. 1/2
ತನ್ನ ಪಾಡಿಗೆ ತಾನು ಟ್ರಾಕ್ಟರ್ ನಲ್ಲಿ ಉಳುಮೆಯ ದುಡಿಮೆ ಮಾಡುತ್ತಿರುವ ಕಾಡಂಚಿನ ರೈತ;
ತನ್ನ ಪಾಡಿಗೆ ತಾನು ತನ್ನ ಕಾಡ ಹಾದಿ ಹಿಡಿದು ಶಾಂತ, ಗಾಂಭೀರ್ಯದ ನಡಿಗೆ ಹಾಕುತ್ತಿರುವ ಹುಲಿರಾಯ!
ಮಾನವ ಮೂಲತಃ ಕಾಡಿನಲ್ಲಿ ಹುಟ್ಟಿ ಬೆಳೆದು ಬಂದವ. ಈಗಲೂ ನಮ್ಮ ರಾಜ್ಯದಲ್ಲೂ ಹಲವು ಜನ ಕಾಡಿನಲ್ಲಿ ಕಾಡಂಚಿನಲ್ಲಿ ಬದುಕುತ್ತಿದ್ದಾರೆ.
ಜೇನಿನನ ಹೊಳೆಯೊ
ಹಾಲಿನ ಮಳೆಯೊ
ಸುಧೆತೊ ಕನ್ನಡ ಸವಿ ನುಡಿಯೊ...
ವಾಣಿಯ ವೀಣೆಯ
ಸ್ವರ ಮಾಧುರ್ಯವೊ
ಸುಮಧುರ ಸುಂದರ
ನುಡಿಯೊ...ಆಹಾ...
- ಚಿ. ಉದಯ್ ಶಂಕರ್
('ಚಲಿಸುವ ಮೋಡಗಳು' ಚಲನಚಿತ್ರ)
ಕುವೆಂಪುರವರ ಹುಟ್ಟೂರು ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯ ಮನೆ ಕವಿಶೈಲದ ತೊಟ್ಟಿ ಮನೆಯ ತೊಟ್ಟಿಯಲ್ಲಿ ತೊಟ್ಟಿಕ್ಕುತ್ತಿರುವ ವರ್ಷದ ಮೊದಲ ಮಳೆಯ ತೊಟ್ಟುಗಳು 💚💙
#parisaraparivara
#kuppalli
#ಕವಿಶೈಲ #ಕುವೆಂಪು #ಕುಪ್ಪಳ್ಳಿ
ಕೇರಳದ ಕಾರ್ಯಕ್ರಮವೊಂದರಲ್ಲಿ ಅಲ್ಲಿನ ಕನ್ನಡದ ವಿದ್ಯಾರ್ಥಿಯೊಬ್ಬಳು ಹಳಗನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರಾದ ಕವಿ ರಾಘವಾಂಕನ 'ಹರಿಶ್ಚಂದ್ರ ಕಾವ್ಯ'ದ ಪದ್ಯದ ಸಾಲುಗಳನ್ನು ಅದ್ಬುತವಾಗಿ ವಾಚಿಸಿದ್ದಾರೆ. ಆಸಕ್ತರು ಕೇಳಿ.
~ ಪರಿಸರ ಪರಿವಾರ
#parisaraparivara
#KannadaSahitya
#ಕನ್ನಡಸಾಹಿತ್ಯ #ಹರಿಶ್ಚಂದ್ರಕಾವ್ಯ #ಹಳಗನ್ನಡ
ಮುಂಗಾರು ಮಳೆ ಸಮಯದಲ್ಲಿ ಮಾತ್ರ ಕೂಗುವ 'ಕೋಗಿಲೆ', ಮಧುರ ಕಂಠಕ್ಕೆ ಅನ್ವರ್ಥನಾಮವಾಗಿ ಬಳಕೆಯಲ್ಲಿದೆ. ಚಿತ್ರದಲ್ಲಿನ ಗಜಗಸೆ (Singapore Cherry) ಮರದ ಹಣ್ಣುಗಳು ಕೋಗಿಲೆಗಳ ನೆಚ್ಚಿನ ಹಣ್ಣುಗಳಾಗಿವೆ.
~ ಪರಿಸರ ಪರಿವಾರ
#parisaraparivara
#koelbird
ಧೂರಮೆಯ ಆಧಾರ
ಈ ಕಲೆಯ ಸಿಂಗಾರ
ಬಂಗಾರ ತೇರೇರಿ
ಮೂಡಣವೇ ಸಿಂಧೂರ
ದಿನ ದಿನ ದಿನ ಹೊಸದಾಗಿದೆ
ಇಂದಿಗೂ ಜೀವಂತ
ಶಿಲೆಯೊಳಗೆ ಸಂಗೀತ
ಸ್ವರ ಸ್ವರದ ಏರಿಳಿತ
ತುಂಗೆಯಲಿ ಶ್ರೀಮಂತ
ಕಣ ಕಣ ಕಣ ಕಣ ಕರೆ ನೀಡಿದೆ
ನೀನೊಮ್ಮೆ ಬಂದಿಲ್ಲಿ
ಹಿತವಾಗಿ ಹಾಡು… ಓ…
ಚಿತ್ರ: ಬೆಳ್ಳಿ ಕಾಲುಂಗುರ
ಸಾಹಿತ್ಯ: ದೊಡ್ಡ ರಂಗೇಗೌಡ
ಮೂಲ ಸಂಗೀತ: ಹಂಸಲೇಖ
ಹಣ್ಣೆಲೆ ಅಜ್ಜ ಅಜ್ಜಿ, ಚಿಗುರೆಲೆಯಾದ ತಮ್ಮ ಪ್ರೀತಿಯ ಮೊಮ್ಮಗನಿಂದ ತಮ್ಮ ತೋಟದಲ್ಲಿ ಗಿಡ ನೆಡಿಸುತ್ತಿರುವುದು!! 💚🌿
ನಾವು ಮಕ್ಕಳ ಹುಟ್ಟು ಹಬ್ಬದ ದಿನ ಕೇಕ್ ಗಳನ್ನು 'ಕಟ್' ಕಾಡುವ, ಜೊತೆಗೆ ಆ ದಿನ ಒಂದಾದರೂ ಗಿಡವಮ್ನ ನೆಟ್ಟು 'ಬೆಳಸುವ' ಪ್ರಯತ್ನ ಮಾಡಿದರೆ ಹುಟ್ಟು ಹಬ್ಬ ಹೆಚ್ಚು ಅರ್ಥ ಪಡೆದು ಕೊಳ್ಳಬಹುದು.
~ ಪರಿಸರ ಪರಿವಾರ
ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ
ಮಳೆ ಸುರಿಸಿ ಹಗುರಾದ ಮುಗಿಲಿನಂತೆ||ಪ||
ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ
ಬೆಳಕಿನುಂಡೆಯ ಬಾನಿಗುರುಳು ಬಿಟ್ಟು
ಹೇಗೆ ಮರೆಯಾಗುವುದೊ ನಿರ್ಧನಿಕನಟ್ಟಿರುಳು
ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟು||
ಸಾಹಿತ್ಯ: ಹೆಚ್.ಎಸ್.ವೆಂಕಟೇಶ ಮೂರ್ತಿ
ಸಂಗೀತ: ರಾಘವೇಂದ್ರ ಬೀಜಾಡಿ
ಹೆಣ್ಣೊಂದು ಕಲಿತೆರೆ ಶಾಲೆಯೊಂದು ತೆರೆದಂತೆ!!
ಎಲ್ಲಾ ಮಕ್ಕಳು, ವಿಶೇಷವಾಗಿ ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದ ಮಕ್ಕಳು, ಹೆಣ್ಣು ಮಕ್ಕಳು ತಮ್ಮ ಆರ್ಥಿಕ ಹಿನ್ನಲೆಯ ಭೇದವಿಲ್ಲದೆ ವಿದ್ಯಾಭ್ಯಾಸ ಪಡೆಯಲು ಇರುವ ಏಕೈಕ ಅವಕಾಶ ಸರ್ಕಾರಿ ಶಾಲೆಗಳು;ಈ ಹಿನ್ನಕೆಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಎಂದರೆ ಈ ಭಾಗದ ಮಕ್ಕಳ ಅಭಿವೃದ್ಧಿ ಎಂದರ್ಥ
"ಪ್ರತಿ ನದಿಗಳ ತಾಯಿ ಕಾಡು!" ಈ ಮಾತನ್ನು ಅಕ್ಷರಶಃ ಸಾಕ್ಷೀಕರಿಸುತ್ತದೆ. ಉಂಚಳ್ಳಿ ಜಲಪಾತದ, ದಟ್ಟ ಕಾಡೊಳಗಿಂತ ಬೋರ್ಗೇರೆದು ಹರಿದು ಬಂದು, ದುಮ್ಮಿಕ್ಕುವ ಅಘನಾಶಿನಿ ನದಿಯ ದೃಶ್ಯ. ಉಂಚಳ್ಳಿ ಜಲಪಾತ ಉತ್ತರ ಕನ್ನಡ ಜಿಲ್ಲೆಯ ಅಘನನಾಶಿನಿ ನದಿಯಿಂದ ಸೃಷ್ಟಿಯಾಗುವ ಸುಂದರ ಜಲಪಾತ. ಇದರ ಎತ್ತರ ಸುಮಾರು 116 ಮೀಟರ್.
ಜಾರ್ಜ್ ಫರ್ನಾಂಡೀಸ್
ಅಸ್ತವ್ಯಸ್ತವಾಗಿ ಬಿದ್ದಿರುವ ಪುಸ್ತಕಗಳು ಓದಿ ಕನ್ನಡಕವನ್ನು ಅಲ್ಲೇ ಸನಿಹದಲ್ಲೇ ಬಿಸಾಕಿ ಗಾಢ ನಿದ್ರೆಗೆ ಜಾರಿದ ಜಾರ್ಜ್ ಫರ್ನಾಂಡೀಸ್, ಅವರು ತೊಡುತ್ತಿದ್ದ ಖಾದಿ ಉಡುಪು, ಕೈ ಚೀಲ, ಪಕ್ಕದಲ್ಲೇ ಅವರಿಗೆ ಕಾವಲಾಗಿ ನಿದ್ದೆ ಮಾಡುತ್ತಿರುವ ನಾಯಿ, ಟೇಬಲ್ ಲ್ಯಾಂಪ್,ದೂರವಾಣಿ ಎಲ್ಲಾ ಎಷ್ಟೊಂದು ಕತೆ ಹೇಳುತ್ತವೆ. 1/2
"ಹುಲಿ ಕಂಡ್ರೆ ಓಡಬಾರದು; ಆನೆ ಕಂಡ್ರೆ ನಿಲ್ಲಬಾರದು..." ಅನ್ನೋದು ಕಾಡಂಚಿನ ಗ್ರಾಮಗಳಲ್ಲಿ ಜನಜನಿತ ಗಾದೆಮಾತು. ಹಾಸನನ ಬೇಲೂರು ತಾಲ್ಲೂಕಿನ ಜಮೀನಿನೊಂದರಲ್ಲಿ ನೆನ್ನೆ ನಡೆದಿರುವ ಈ ಆನೆ ದಾಳಿಯ ದೃಶ್ಯ, ಅಕ್ಷರಶಃ ಆ ಗಾದೆ ಮಾತನ್ನು ನಿಜವೆನಿಸುತ್ತದೆ.1/n
ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ಮಾರ್ಗ 💚❤
ಜಗತ್ಪ್ರಸಿದ್ಧ ಅರಣ್ಯಗಳಲ್ಲಿ ಒಂದಾದ ನಮ್ಮ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ಮಾರ್ಗ. ಗೋಪಾಲಸ್ವಾಮಿ ಬೆಟ್ಟ ಕರ್ನಾಟಕದ ಪ್ರಮುಖ ಗಿರಿಧಾಮಗಳಲ್ಲಿ ಒಂದಾಗಿದ್ದು, ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. 1/2
ದುಡಿಮೆ ದುಡ್ಡಿನ ತಾಯಿ!!
ಕೆಲವರಿಗೆ ಮಳೆಯಲ್ಲಿಯೇ ಹೆಚ್ವು ದುಡಿಮೆ; ಅಂತ ದುಡಿಮೆಗಳಲ್ಲಿ ಸ್ವಿಗ್ಗಿ, ಜೊಮಟೋ ತರಹದ ಮನೆಮನೆಗಳಿಗೆ ಆಹಾರ ಒದಗಿಸುವ ಕಂಪನಿಗಳ ಕೆಲಸ ಒಂದು!
ಭ್ರಷ್ಟಚಾರ, ಅಕ್ರಮ ಮಾರ್ಗದಲ್ಲಿ ಹಣ ಸಂಪಾದಿಸುವವರು ಅದೆಷ್ಟೆ ದೊಡ್ಡ ಹುದ್ದೆಯಲ್ಲಿರಲಿ, ಅದೆಷ್ಟೆ ಹಣ ಸಂಪಾದಿಸಲಿ ಅಂತವರು ಖಂಡಿತಾ ಗೌರವಕ್ಕೆ ಅರ್ಹರಲ್ಲ. 1/2
ಇದ್ದು ಬಿಡಬಾರದಿತ್ತೆ ಸದಾ ಮನಸು ಮಗುವಿನಂತೆ...
ಎಲ್ಲರನ್ನು ಸಮಾನವಾಗಿ ಕಾಣುವಂತೆ
ಎಲ್ಲವನ್ನು ಸಮಾನವಾಗಿ ನೋಡುವಂತೆ
ನಗು ಬಂದಾಗ ಮನ ಬಿಚ್ಚಿ ನಗುವಂತೆ
ಅಳು ಬಂದಾಗ ಕಣ್ಣೀರು ಸುರಿಸಿ ಹಗುರಾಗುವಂತೆ!! 1/3
8 ಬಾರಿ ಮೈಸೂರು ದಸರಾದ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಇನ್ನಿಲ್ಲ 😓😥
ಹಾಸನ: ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಾಳೆಕೆರೆ ಫಾರೆಸ್ಟ್ನಲ್ಲಿ ಸೋಮವಾರ ನಡೆದ ಕಾಡಾನೆ ಸೆರೆ, ರೆಡಿಯೊ ಕಾಲರ್ ಅಳವಡಿಕೆ ಕಾರ್ಯಾಚರಣೆ ವೇಳೆ, ಒಂಟಿ ಸಲಗವೊಂದು ಹೊಟ್ಟೆಗೆ ತಿವಿದಿದ್ದರಿಂದ ಸಾಕಾನೆ ಅರ್ಜುನ ಮೃತಪಟ್ಟಿದೆ.
#arjunaelephant
ನಮ್ಮ ಪದ; ಜಾನಪದ!
ಸೀಮಂತ ಕಾರ್ಯಕ್ರಮದಲ್ಲಿ ಹೆಣ್ಣು ಮಗಳೊಬ್ಬಳು ತನ್ನ ಬಯಕೆ, ತವರು ಮನೆಯ ಕುರಿತ ಜಾನಪದ ಹಾಡೊಂದನ್ನು ಸುಂದರವಾಗಿ ಹಾಡಿದ್ದಾರೆ.
#parisaraparivara
#janapadasongs
ಕಡಿದಾದ ಬೆಟ್ಟಗಳನ್ನು ನೇರವಾಗಿ ಹತ್ತಿದರೆ ಶ್ರಮ ಜಾಸ್ತಿ. ಹೀಗಾಗಿಯೇ ಯಾವುದೇ ಬೆಟ್ಟಗಳ ದಾರಿಗಳು ನೇವಾಗಿರದೆ, ಸುತ್ತಿ ಬಳಸಿ ಇರುತ್ತವೆ.
ಇದನ್ನು ನಾವು ವಿಜ್ಞಾನ ಎನ್ನುತ್ತೇವೆ. ನಮಗೆ ಮಾತ್ರ ಗೊತ್ತುರುವುದು ಎಂದುಕೊಳ್ಳುತ್ತೇವೆ. ಆದರೆ ಇದು ಸಾಮಾನ್ಯ ಜ್ಞಾನ. ಈ ಸಾಮಾನ್ಯ ಜ್ಞಾನ ಕತ್ತೆಗಳಿಗೂ ಕೂಡ ಚೆನ್ನಾಗಿ ಗೊತ್ತು.
~ ಪರಿಸರ ಪರಿವಾರ
ಈ ಸೂಜಿಮೆಣಸೆಂಬ ಜೀರಿಗೆ ಮೆಣಸು ಅದೇಕೋ ಮಲೆನಾಡ ಗಡಿ ದಾಟಲೇ ಇಲ್ಲ. ಒಳ್ಳೆಯ ಕಾರ, ಗ್ಯಾಸ್ ಆಗದ, ದೇಹಕ್ಕೂ ಒಳ್ಳೆಯದಾಗಿರುವ ಇದರ ಹಿಂದೆ ಮಾಮೂಲಿ ಮೆಣಸಿನಕಾಯಿ ನಿವಾಳಿಸಿ ಒಗೆಯಬೇಕು. ಆದರೂ ಇದು ವ್ಯಾಪಕವಾಗಿ ಹರಡಿಲ್ಲ. 1/2
ವನ್ಯಜೀವಿಗಳನ್ನು ಬೇಟೆಯಾಡಿದಾಗ, ಅಪಘಾತ ಸೇರಿ ಇತರ ಯಾವುದೇ ಕಾರಣದಿಂದ ಸಾಯಿಸಿದಾಗ, ಸತ್ತ ಜೀವಿ ಗರ್ಭಿಣಿಯಾಗಿರಬಹುದು ಅಥವಾ ಹಾಲುಣಿಸುವ ತಾಯಿಯಾಗಿರಬಹುದು. ಇಂತಹ ಜೀವಿಗಳು ಸತ್ತರೆ ಆ ತಾಯಿಯನ್ನು ಅವಲಂಬಿಸಿದ ಪುಟ್ಟ ಮರಿಗಳು ತಬ್ಬಲಿಯಾಗಿ ಹಸಿವಿನಿಂದ ಸಾಯುವುದು ನಿಶ್ಚಿತ. 1/2
ಮಾನವರಿಗೆ ಮಾತ್ರ ಸಾಕುನಾಯಿ, ಬೀದಿನಾಯಿ, ಕರಿನಾಯಿ, ಬಿಳಿನಾಯಿ... ದುಡ್ಡಿಗೆ ತಕ್ಕಂತೆ ಜೆರ್ಮನ್ ಶೆಪರ್ಡ್, ಲ್ಯಾಬರ್ಡರ್, ಗೋಲ್ಡನ್ ರಿಟ್ರಿವೋರ್, ಫಗ್, ಡಾಬರ್ಮನ್ ಇತ್ಯಾದಿ ಇತ್ಯಾದಿ
ನಾಯಿಗಳಿಗೆ ನಾಯಿಗಳೆಲ್ಲಾ ಒಂದೇ. ಎಲ್ಲಾ ನಾಯಿಗಳು ಅವುಗಳಿಗೆ ತಮ್ಮ ಬಂದುಗಳೇ, ಸ್ನೇಹಿತರೆ!!
ಮೊಲಗಳು & ಇಲಿಗಳು ಎರಡೂ ಕೂಡ ಒಂದೇ ಕುಟುಂಬದ ಪ್ರಾಣಿಗಳು. ಇವೆರಡು ಕೂಡ ಭೂಮಿಯಲ್ಲಿ ಬಿಲ ಮಾಡುತ್ತವೆ. ಎರಡಕ್ಕೂ ಹಲ್ಲುಗಳೇ ಮಹಾ ಆಯುಧಗಳು. ಎರಡೂ ಕೂಡ ಕಡಿಮೆ ಗರ್ಭಾವಧಿ ಹೊಂದಿದ್ದು(1 ತಿಂಗಳು) ಒಮ್ಮೆಗೆ 10 ರವರೆಗೂ ಮರಿ ಹಾಕುತ್ತವೆ. ಇವೆರಡು ಮರಿ ಹಾಕಿದಾಗ ಮರಿಗಳ ಮೈಯಲ್ಲಿ ಕೂದಲಿರುವುದಿಲ್ಲ. ನಂತರ ಮರಿಗಳು ಬೆಳೆದಂತೆ ಕೂದಲು ಬೆಳೆಯುತ್ತವೆ
ಗೀತೆ: ವಿಶ್ವ ವಿನೂತನ ವಿದ್ಯಾ ಚೇತನ
ಸಾಹಿತ್ಯ – ಚನ್ನವೀರ ಕಣವಿ
ಸಂಗೀತ – ಎಚ್. ಕೆ. ನಾರಾಯಣ್
ಗಾಯನ – ಸಮೂಹ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸoಸ್ಕಾರಿ ಜಯ ಭಾರತಿ ।।
ಕರುನಾಡ ಸರಸ್ವತಿ
ಗುಡಿ ಗೋಪುರ ಸುರ ಶಿಲ್ಪ ಕಲಾಕೃತಿ
ಕೃಷ್ಣೆ ತುoಗೆ ಕಾವೇರಿ
ಪವಿತ್ರಿತ ಕ್ಷೇತ್ರ ಮನೋಹಾರಿ || ವಿಶ್ವ ।।1/2
ದಟ್ಟಕಾಡ ಮಧ್ಯದ ಮಲೆಯಲಿ
ದೊಡ್ಡ ಬಂಡೆಯ ತುದಿಯಲ್ಲಿ
ಸಾವಿರಾರು ವರ್ಷಗಳಿಂದ
ವಿರಾಜಮಾನವಾಗಿ ಕುಳಿತಿರುವ
ಅಪರೂಪದ ಗಣೇಶ ವಿಗ್ರಹ 🙏
📍ದೋಲ್ಕಲ್ ಬೆಟ್ಟ, ದಾಂತೇವಾಡ ಜಿಲ್ಲೆ, ಛತ್ತೀಸ್ಗಢದ
ದಾಖಲೆಗಳ ಪ್ರಕಾರ 1100 ವರ್ಷಗಳ ಹಿಂದೆ ನಾಗವಂಶಿ ರಾಜವಂಶದ ಕಾಲದಲ್ಲಿ ಗಣೇಶನ ವಿಗ್ರಹವನ್ನು ದಟ್ಟ ಕಾಡೊಳಗಿನ ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾಗಿದೆ.
ಬೆಟ್ಟಗಳನ್ನು ನೇರವಾಗಿ ಹತ್ತುವುದು ಹೆಚ್ಚು ತ್ರಾಸದಾಯಕ; ಹೀಗೆ ಕ್ರಾಸ್ ಆಗಿ ನಡೆದರೆ ದಾರಿ ಸುಲಭ. "ಕತ್ತೆ ದುಡಿಯೊ ಹಾಗೇ ಸುಮ್ಮೆ ದುಡಿಯೋದಲ್ಲ; ಸ್ವಲ್ಪ ಬುದ್ದಿ ಉಪಯೋಗಿಸಬೇಕು" ಅಂತಾರೆ ಆದರೆ ಇಲ್ಲಿ ಕತ್ತೆಗಳು ಪ್ರಕೃತಿಯ ಸಹಜ ನಿಯಮ ಪಾಲಿಸಿ ತಮ್ಮ ಕೆಲಸವನ್ನು ಸುಲಭಗೊಳಿಸಿಕೊಂಡಿವೆ.
~ ಪರಿಸರ ಪರಿವಾರ
ಜೀವಶಾಸ್ತ್ರಜ್ಞರು ಕಾಡುಬೆಕ್ಕನ್ನು 'ಪಾಕೇಟ್ ಗಾತ್ರ ಹುಲಿ' ಎಂದು ಗುರ್ತಿಸುತ್ತಾರೆ. ತನ್ನ ರಹಸ್ಯಮಯ ತಂತ್ರಗಳು ಮತ್ತು ಅಪಾರ ಕೌಶಲ್ಯ ಹೊಂದಿದ ರಣ ಬೇಟೆಗಾರ. ಇವು ಹಕ್ಕಿಗಳನ್ನು ಹಿಡಿಯಲು ಗಾಳಿಯಲ್ಲಿ ಜಿಗಿಯಬಲ್ಲವು. ಮೀನುಗಳನ್ನು ಹಿಡಿಯಲು ನೀರಿನಲ್ಲಿ ಧುಮುಕಬಲ್ಲವು. ಬಿಲಗಳಲ್ಲಡಗಿದ ದಂಶಕಗಳನ್ನು ಹೊಂಚು ಹಾಕ ಹಿಡಿಯಬಲ್ಲವು. 1/2
ಕೊಡಗಯ ಭಾಗದಲ್ಲಿ ಸತತವಾಗಿ ಅತ್ಯುತ್ತಮ ಮಳೆಯಾಗುತ್ತಿದ್ದು, ಉಷ್ಣಾಂಶ ಕಡಿಮೆಯಾಗಿ ಮತ್ತೆ ಕೊಡಗಿನ ನೈಜ ಕಳೆ ಕಳೆಗಟ್ಟುತ್ತಿದೆ. ಬರಿದಾಗಿದ್ದ ಕೆರೆ- ಕಟ್ಟೆಗಳೂ ಮಳೆಯಿಂದ ಜೀವಕಳೆ ಪಡೆದುಕೊಳ್ಳುತ್ತಿವೆ.
ಕಾಡಂಚಿನ ಕಾಫಿ ತೋಟವೊಂದರ ಕಟ್ಟೆಯೊಂದರಲ್ಲಿ ಗಜಪಡೆಯೊಂದು ಜಲಕ್ರೀಡೆಯಲ್ಲಿ ಮಗ್ನವಾಗಿರುವುದುದನ್ನು ದೃಶ್ಯದಲ್ಲಿ ಕಾಣಬಹುದಾಗಿದೆ.
ನೀವು ಯಾವ ಬ್ರಾಂಡ್ ಸೋಪ್,ಶಾಂಪೂ,ಪೇಸ್ಟ್ ಬಳಕೆ ಮಾಡ್ತೀರಾ ಅಂತ ಧರ್ಮಸ್ಥಳ, ಸುಬ್ರಹ್ಮಣ್ಯ ದಂತ ಪವಿತ್ರ ಕ್ಷೇತ್ರಗಳ ಸ್ನಾನಘಟ್ಟಕ್ಕೆ ಬಂದು ಹೇಳೋದೇನೂ ಬೇಡ. ಪವಿತ್ರ ಸ್ನಾನ ಮಾಡಿಕೊಂಡು ಹೋಗಿ ಸಾಕು. ಸ್ನಾನ ಮಾಡಿ ಹೋಗುವಾಗ ನೀವು ತಂದ ವಸ್ತುವನ್ನು ವಾಪಸ್ ಹಿಡ್ಕೊಂಡು ಹೋಗಿ... ಕೆಲವರು ಮೂರು ತಿಂಗಳು ಸ್ನಾನನೇ ಮಾಡದವರ ಹಾಗೆ, 1/3
ಬೂಲ್'ವಾರ್ಡ್ ರಸ್ತೆ: ರಸ್ತೆಯ ಉದ್ದಕ್ಕೂ, ರಸ್ತೆಯ ಮಧ್ಯಭಾಗದಲ್ಲಿ (ಡಿವೈಡರ್ ಅನ್ನು ವಿಶಾಲವಾಗಿ ಮಾಡುವುದು) ಉದ್ಯಾನ ನಿರ್ಮಿಸಿ, ಅಲ್ಲಿ ಗಿಡ- ಮರ ಬೆಳೆಸುವುದು. ಮೈಸೂರಿನ ಹಳೆ DC Office ರೋಡ್, ವಿಶ್ವ ಮಾನವ ರಸ್ತೆ, ರಿಂಗ್ ರೋಡ್ ಸೇರಿ ಹಲವು ರಸ್ತೆಗಳು ಇದೇ ಮಾದರಿಯಲ್ಲಿ ನಿರ್ಮಾಣವಾಗಿವೆ. 1/2