Nagathihalli Chandrashekara Profile Banner
Nagathihalli Chandrashekara Profile
Nagathihalli Chandrashekara

@NomadChandru

Followers
32,843
Following
51
Media
1,858
Statuses
2,841

Teacher, Social Activist, Author, Publisher, Columnist, Environmentalist, Screenplay & Dialogue Writer, Lyricist, TV & Film Director.

Bengaluru
Joined October 2012
Don't wanna be here? Send us removal request.
Explore trending content on Musk Viewer
@NomadChandru
Nagathihalli Chandrashekara
3 years
25 ವರ್ಷದ ಮಧುರನೆನಪು. ಕಾಲು ಶತಮಾನದಾದ್ಯಂತ ಕೃತಜ್ಞತೆಗಳು .
110
335
4K
@NomadChandru
Nagathihalli Chandrashekara
5 years
ಟಾಕೀಸಿನೊಳಗೆ ಜನ ಬರದೆ,ನೋಡುಗ ಎಂದೋ ಬಿಟ್ಟ ನಿಟ್ಟುಸಿರುೂ ಆಚೆ ಹೋಗದೆ, ಉದ್ಯಮ ಉಸಿರುಗಟ್ಟಿದ್ದ ಹೊತ್ತಲ್ಲಿ ಈ ಕರಾವಳಿ ಹುಡುಗ ನಾರಾಯಣನಾಗಿ ಅವತರಿಸಿ ಮಾಡಿರೋ ಕ್ರಾಂತೀನ ನಾವೆಲ್ಲ ಚೌಕಾಶಿ ಮಾಡದೆ ಅಭಿನಂದಿಸಬೇಕು.
Tweet media one
27
248
3K
@NomadChandru
Nagathihalli Chandrashekara
1 year
ಮಾಡಾಳರು ಮಾಡಿರುವ ಭ್ರಷ್ಟತೆ ಹಾಗೂ ಕಲಬೆರಕೆಯ ಕಾರಣ ಸರ್ಕಾರೀ ಸ್ವಾಮ್ಯದ ಉದ್ಯಮ ಮತ್ತು ಉತ್ಪನ್ನಗಳಲ್ಲಿ ನಂಬಿಕೆ ಮತ್ತು ಗೌರವ ಇರಿಸಿದ ನನ್ನಂಥವರು ಬಹುಕಾಲದಿಂದ ಬಳಸುತ್ತಿದ್ದ ಮೈಸೂರು ಸ್ಯಾಂಡಲ್ ಸೋಪ್ ಬಳಸಲೂ ಹಿಂಜರಿಯುವಂತಾಗಿದೆ.
Tweet media one
139
364
3K
@NomadChandru
Nagathihalli Chandrashekara
1 year
ಸಾಮಾನ್ಯವಾಗಿ ಅಧಿಕಾರರೂಢ ಮಂತ್ರಿಗಳು ಯಾವ ಸಭೆಗೇ ಹೋಗಲಿ ಮೈಕು ಸಿಕ್ಕೊಡನೆ “ನಮ್ಮ ಸರ್ಕಾರದಲ್ಲಿ…” ಎಂದು ತಮ್ಮ ಪಕ್ಷದ ತುತ್ತೂರಿ ಊದಿಯೇಬಿಡುತ್ತಾರೆ. ಆದರೆ ಪ್ರಜಾವಾಣಿಯ ಸಿನಿಮಾ ಸಮಾರಂಭದಲ್ಲಿ ಸಿದ್ದರಾಮಯ್ಯನವರು ಅಪ್ಪಿತಪ್ಪಿ ಒಂದಕ್ಷರವನ್ನೂ ಸಿನಿಮಾದ ಆಚೆಗೆ ಮಾತನಾಡಲಿಲ್ಲ. ಈ ಸಮಯಪ್ರಜ್ಞೆ ಮತ್ತು ಔಚಿತ್ಯಪ್ರಜ್ಞೆ ರಾಜಕಾರಣಕ್ಕೆ ಅಗತ್ಯ.
Tweet media one
109
265
3K
@NomadChandru
Nagathihalli Chandrashekara
2 years
“…ಇಲ್ಲಿ ಎಲ್ಲ ಕಾದಿದ್ದೇವೆ. ಮರಳಿ ಬಾ ಮಗುವೇ”
Tweet media one
9
186
3K
@NomadChandru
Nagathihalli Chandrashekara
2 years
@TheNameIsYash ನಮ್ಮ ಪ್ರೀತಿಯ ಯಶ್ #INDIATODAY ಸಂದರ್ಶನದಲ್ಲಿ ನೇರವಾಗಿ, ಪ್ರಾಮಾಣಿಕವಾಗಿ, ಮಹತ್ವಾಕಾಂಕ್ಷಿಯಾಗಿ ಮುಖ್ಯವಾಗಿ ಕನ್ನಡ ಕಲಾವಿದನಾಗಿ ಮಾತನಾಡಿರುವುದು ಬಹಳ ಅರ್ಥಪೂರ್ಣವಾಗಿದೆ.ಯಶ್ ,ನಿಮ್ಮ ಬಗ್ಗೆ ನನ್ನ ಅಭಿಮಾನ ನೂರ್ಮಡಿಯಾಗಿದೆ.ನಿಮ್ಮ ದಾರಿಯಲ್ಲಿ ಹಲವರು ಸಾಗುತ್ತಿದ್ದಾರೆ.ಕನ್ನಡ ಚಿತ್ರರಂಗದ ಈ ಸುವರ್ಣಕಾಲ ಚಿರಾಯುವಾಗಲಿ
67
459
3K
@NomadChandru
Nagathihalli Chandrashekara
3 years
Tweet media one
47
471
3K
@NomadChandru
Nagathihalli Chandrashekara
2 years
ನನಗೆ ಕ್ರಿಕೆಟ್ ಬಗ್ಗೆ ಆಸಕ್ತಿ ಇಲ್ಲ. ಅವರಿಗೆ ಸಿನಿಮಾ ಬಗ್ಗೆ ಆಸಕ್ತಿ ಇಲ್ಲ.ಆದರೆ ಒಳ್ಳೆಯ ಮಿತ್ರರು. ಅಕ್ಕಪಕ್ಕದಲ್ಲೇ ನಮ್ಮಿಬ್ಬರ ಕಛೇರಿ.ಮನೆಗಳೂ ಒಂದೇ ರಸ್ತೆಯಲ್ಲಿ.ಭೇಟಿ ಮಾತ್ರ ಯಾವುದೋ ಊರಿನ ವಿಮಾನ ನಿಲ್ದಾಣಗಳಲ್ಲಿ! ಕೀರ್ತಿವಂತ ಕ್ರಿಕೆಟಿಗ ಇವರು. ಭಾರತಕ್ಕೆ ಗೌರವ ತಂದ ಹೆಮ್ಮೆಯ ಕನ್ನಡಿಗ ಅನಿಲ್ ಕುಂಬ್ಳೆ.
Tweet media one
11
89
3K
@NomadChandru
Nagathihalli Chandrashekara
4 years
ನನ್ನ ಮೆಚ್ಚಿನ ಮಾತುಗಳು ನನ್ನ ಮೆಚ್ಚಿನ ಪಾತ್ರಗಳು ನನ್ನ ಮೆಚ್ಚಿನ ಸೇತುವೆ
85
329
2K
@NomadChandru
Nagathihalli Chandrashekara
4 years
ನಮ್ಮ ಕನ್ನಡ ಕಲಾವಿದರಿಗೆ #ಗೋವಾ ಚಲನ ಚಿತ್ರ ಉತ್ಸವದಲ್ಲಿ ಮನ್ನಣೆ ಲಭಿಸಿರುವುದು ಶ್ಲಾಘನೀಯ. #ಸುದೀಪ್ ಅವರಿಗೆ ನನ್ನ ಅಭಿನಂದನೆಗಳು.
Tweet media one
15
322
2K
@NomadChandru
Nagathihalli Chandrashekara
2 years
Tweet media one
25
406
2K
@NomadChandru
Nagathihalli Chandrashekara
1 year
ಈ ಚೆಲುವೆಗಿಂದು ಇಪ್ಪತ್ತಾರು ವರ್ಷ!
Tweet media one
81
143
2K
@NomadChandru
Nagathihalli Chandrashekara
2 years
ನನ್ನ ಜಾಣಶಿಷ್ಯರು ಸೃಷ್ಟಿಸಿರುವ #ಡೈಮಂಡ್ ಕ್ರಾಸ್ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿದ ಪ್ರೀತಿಯ ನಟ #ಸುದೀಪ್ ಅವರಿಗೆ ಕೃತಜ್ಞತೆಗಳು.
Tweet media one
10
374
2K
@NomadChandru
Nagathihalli Chandrashekara
5 years
ಕನ್ನಡ ವಾಣಿಜ್ಯ ಸಿನಿಮಾವನ್ನು ಮೊದಲಬಾರಿಗೆ ವಿಶ್ವಮಾರುಕಟ್ಟೆಗೆ ವಿಸ್ತರಿಸಿದ ಯಶ್ ಗೆ ಜನ್ಮದಿನದ ಶುಭ ಹರಕೆ. ಒಳಿತಾಗಲಿ.
Tweet media one
8
170
2K
@NomadChandru
Nagathihalli Chandrashekara
5 years
ಇತರರ ಬೆವರಿನ ಬೆಲೆಯನ್ನು ಕದ್ದುಣ್ಣುವುದು ಅಕ್ಷಮ್ಯ. ಯಾರದೇ ಚಿತ್ರ ಇರಲಿ; ಪೈರಸಿ ಮಾಡುವುದು ನಮ್ಮ ಮನೆಗೆ ನಾವೇ ಬೆಂಕಿ ಹಾಕಿದಂತೆ.ಕನ್ನಡ ನಾವೆಲ್ಲ ಬದುಕಬೇಕಾದ ಪುಟ್ಟಮನೆ.
Tweet media one
31
238
2K
@NomadChandru
Nagathihalli Chandrashekara
8 years
ನೀವಿತ್ತ ಪುಟ್ಟ ಗಿಡ ನಿಸ್ಸ೦ಶಯವಾಗಿ ನಮ್ಮ ಮನೆಯ೦ಗಳದಲ್ಲಿ ಬೆಳೆದು ನಿ೦ತಿರುತ್ತದೆ. ನಿಮ್ಮ ದಾ೦ಪತ್ಯ ಸದಾ ಹಸಿರಾಗಿರಲಿ. ಅಲ್ಲಿ ಒ೦ದೆರಡು ಮಲ್ಲಿಗೆ ಅರಳಲಿ.
Tweet media one
25
145
2K
@NomadChandru
Nagathihalli Chandrashekara
1 year
ಎಂದೂ ಬತ್ತಿಹೋಗದ ಪನ್ನೀರ ಜೀವನದಿಯನ್ನು ಮತ್ತು ಮಮಕಾರ ಮಾಯೆಯನ್ನು ಮತ್ತೊಮ್ಮೆ ಬೆಳ್ಳಿಪರದೆಯ ಮೇಲೆ ನೋಡಬಯಸುವವರಿಗಾಗಿ…
Tweet media one
43
108
2K
@NomadChandru
Nagathihalli Chandrashekara
3 years
ಮೊದಲ/ಕೊನೆಯ ಸ್ಪಷ್ಟನೆ: ನಾನು ಎಡವೂ ಬಲವೂ ಅಲ್ಲ. ಮನುಷ್ಯ ಪಂಥದವ. ಬರಹಗಾರ ಸದಾ ವಿರೋಧಪಕ್ಷ ಎಂದು ನಂಬಿದವ.ಕಾಂಗ್ರೆಸ್, ಜೆಡಿಎಸ್ ತಪ್ಪು ಮಾಡಿದಾಗಲೂ ಬರೆದಿದ್ದೇನೆ. ನನ್ನ ಸಿನಿಮಾ, ಸಾಹಿತ್ಯ, ಶಾಲೆ, ಹಳ್ಳಿಕೆಲಸಗಳಿಗೆ ಯಾವ ಪಕ್ಷದ ಹಂಗೂ ಇಲ್ಲ. ಅಕ್ಷರಜಾಣರೇ ಕೆಸರೆರಚಾಟ ಸುಲಭ. ಇದರಿಂದ ಎಲ್ಲರಿಗೂ ವಿರೂಪ. ಇದು ವ್ಯರ್ಥ.ಎಲ್ಲರಿಗೂ ನಮಸ್ಕಾರ.
63
219
2K
@NomadChandru
Nagathihalli Chandrashekara
5 years
ಯುವರತ್ನ ಸೆಟ್ ನಲ್ಲಿ...
Tweet media one
13
85
2K
@NomadChandru
Nagathihalli Chandrashekara
3 years
Tweet media one
26
144
2K
@NomadChandru
Nagathihalli Chandrashekara
6 months
ನಮ್ಮ ಪ್ರೀತಿಯ ವೈದ್ಯ ಡಾ. ಸಿ.ಎನ್. ಮಂಜುನಾಥ್ ರಾಜಕಾರಣ ಪ್ರವೇಶಿಸಿದ್ದು ದುರದೃಷ್ಟಕರ. ಕಾರಣ ಏನೇ ಇರಲಿ. ಇಲ್ಲಿ ಪಡೆದುದನ್ನು ಅಲ್ಲಿ ಕಳೆದುಕೊಳ್ಳಬಹುದೇನೋ. ಜನರ ಸೇವೆ ಮಾಡಲು ರಾಜಕಾರಣ ಒಂದೇ ದಾರಿ ಅಂತ ಯಾವ ಮೂರ್ಖ ಹೇಳಿದ?ಸಮಾಜವನ್ನು ಕಟ್ಟಲು ಸಾವಿರ ದಾರಿಗಳಿವೆ. ಮಂಜುನಾಥ್ ಇದು ನಿಮಗೆ ಬೇಕಿತ್ತೆ?
435
183
2K
@NomadChandru
Nagathihalli Chandrashekara
1 year
ಕಾಂಗ್ರೆಸ್ಸಿಗರೇ, ನಿಮ್ಮ ಐದು ಗ್ಯಾರಂಟಿಗಳು ಹಾಗಿರಲಿ. ಈಗ ಬೇಕಿರುವುದು ಒಂದೇ ಗ್ಯಾರಂಟಿ. ಮತದಾರನಿಗೆ ಮತದಾನ ಮಾಡಿದ್ದಕ್ಕೆ ಪಾಪಪ್ರಜ್ಞೆ ಮೂಡಿಸದಂಥ ಬದ್ದತೆ ಮತ್ತು ಶುದ್ಧತೆಯಿಂದ ನಾಡನ್ನು ನಾಳೆಗಳಿಗೆ ಮುನ್ನಡೆಸುವ ಐಕಮತ್ಯ.
63
152
2K
@NomadChandru
Nagathihalli Chandrashekara
6 years
ಕನ್ನಡದ ಕೆ.ಜಿ.ಎಫ್.ಬಹುಭಾಷೆಗಳಲ್ಲಿ ಅಭಿವ್ಯಕ್ತಗೊಳ್ಳುತ್ತಿರುವುದು ಸೋಜಿಗ ಮತ್ತು ಸಂತಸ. ಕನ್ನಡದ ಗೌರವ, ಘನತೆ ಮತ್ತು ಮಾರುಕಟ್ಟೆ ವಿಸ್ತರಿಸುವ ಇಂಥ ಪ್ರಯತ್ನಗಳು ಫಲಿಸಲಿ. ತಂಡದ ಎಲ್ಲರಿಗೂ ಶುಭ ನೆನಕೆಗಳು.
36
196
2K
@NomadChandru
Nagathihalli Chandrashekara
2 years
ವಧು-ವರ ಒಟ್ಟಿಗೇ ಬಂದು ಖುದ್ದಾಗಿ ಮದುವೆಗೆ ಕರೆಯುವುದು ಅಪರೂಪ.ಈಗ ಎಲ್ಲ ವಾಟ್ಸಪ್ ನಲ್ಲೆ. ನನ್ನ ಪ್ರೀತಿಯ ಕಲಾವಿದರಾದ ವಸಿಷ್ಠ ಸಿಂಹ-ಹರಿಪ್ರಿಯ ಬಂದಿದ್ದರು. ‘ಬಹುಕಾಲ ನೆಮ್ಮದಿಯಿಂದ ಬಾಳಿ’ಎಂದೆ. ‘ಅದು ಅತ್ಲಾಗೆ ಇರಲಿ ;ಉಡುಗೊರೆ ಖಡ್ಡಾಯ’ ಅಂತ ಸಿಂಹ ಘರ್ಜಿಸುತ್ತಿದೆ.ಏನು ಕೊಡಲಿ? @ImSimhaa
Tweet media one
40
39
2K
@NomadChandru
Nagathihalli Chandrashekara
1 year
ಗುಜರಾತ್ ಹಳ್ಳಿಯೊಂದರಲ್ಲಿ ತಂಪು ಕನ್ನಡಕ ಹಾಕಿದ್ದಕ್ಕೆ ದಲಿತ ವ್ಯಕ್ತಿಯೊಬ್ಬನನ್ನು ಸವರ್ಣೀಯರು ಥಳಿಸಿದ್ದಾರೆ. ನಾನು ಪ್ರೌಢ ಶಾಲೆಯಲ್ಲಿ ಓದುತ್ತಿದ್ದಾಗ ಶೂ ಧರಿಸಿ ಬಂದ ದಲಿತ ಬಾಲಕನಿಗೆ ಡ್ರಿಲ್ ಮಾಸ್ತರು ಥಳಿಸಿದ್ದರು. ಆತ ಅವಮಾನದಿಂದ ಶಾಲೆಯನ್ನೇ ಬಿಟ್ಟ. ಐವತ್ತು ವರ್ಷಗಳ ನಂತರವೂ ಭಾರತ ಬದಲಾಗಿಲ್ಲವೇ? ನಾಗರೀಕ ಸಮಾಜಕ್ಕಿದು ನಾಚಿಕೆಗೇಡು.
118
293
2K
@NomadChandru
Nagathihalli Chandrashekara
3 years
‘ಮಲೆನಾಡಿನ ಮುದುಕ’ನ ಮುಂಜಾನೆಯ ಸ್ವಗತಗಳು…
20
92
1K
@NomadChandru
Nagathihalli Chandrashekara
3 years
ಕೇಂದ್ರ ಆರೋಗ್ಯ ಮಂತ್ರಿ ಹರ್ಷ ವರ್ಧನ್ “ಆಮ್ಲ ಜನಕದ ಕೊರತೆ ಇಲ್ಲ” ಎನ್ನುತ್ತಾರೆ. ನಗರದ ಖಾಸಗಿ ಆಸ್ಪತ್ರೆಗಳು ದೈನಂದಿನ ಅಗತ್ಯ 300 ಟನ್ ಇದ್ದು 100 ಟನ್ ಮಾತ್ರ ಪೂರೈಕೆಯಾಗುತ್ತಿದೆ ಎನ್ನುತ್ತಿವೆ. ಕೊರೊನಾ 2ನೇ ಅಲೆ ಅಪ್ಪಳಿಸುವ ಬಗ್ಗೆ ಬಹಳ ಹಿಂದೆಯೇ ಸರ್ಕಾರಕ್ಕೆ ಅರಿವಿತ್ತು. ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ರೋಗ ವಾಸಿಯಾಗುವುದು ಯಾವಾಗ?
52
197
1K
@NomadChandru
Nagathihalli Chandrashekara
1 year
Tweet media one
22
98
1K
@NomadChandru
Nagathihalli Chandrashekara
2 years
ಪ್ರೀತಿಯ ಅಪ್ಪುಗೆ ನೆನಪಿನ ಹೊತ್ತಗೆ!
Tweet media one
6
85
1K
@NomadChandru
Nagathihalli Chandrashekara
5 years
ನಮ್ಮೆಲ್ಲರ ಸಿನಿಮಾ ‘ಇಂಡಿಯಾ ವರ್ಸಸ್ ಇಂಗ್ಲೆಂಡ್ ‘ನ ಟ್ರೈಲರ್ ಲೋಕಾರ್ಪಣೆಯಾದ ಕೆಲವು ಗಂಟೆಗಳಲ್ಲೇ ಲಕ್ಷ ದಾಟಿದ ವೀಕ್ಷಣೆ! ಪ್ರೀತಿಯ ದರ್ಶನ್ ಅವರ ನಿರಪೇಕ್ಷ ನೆರವಿಗೆ ಋಣಿ.
Tweet media one
14
113
1K
@NomadChandru
Nagathihalli Chandrashekara
2 years
ಗೆಳೆಯಾ, ಸಿಹಿ ಸುದ್ದಿ ಕೇಳಿ ಸಂತೋಷಪಟ್ಟೆ. ಶುಭವಾಗಲಿ. #Imsimhaa
Tweet media one
2
24
1K
@NomadChandru
Nagathihalli Chandrashekara
5 years
ನೀವಿತ್ತ ಪುಟ್ಟ ಗಿಡ ನಿಸ್ಸ೦ಶಯವಾಗಿ ನಮ್ಮ ಮನೆಯ೦ಗಳದಲ್ಲಿ ಬೆಳೆದು ನಿ೦ತಿದೆ. ನಿಮ್ಮ ದಾ೦ಪತ್ಯ ಸದಾ ಹಸಿರಾಗಿರಲಿ. ನಿಮ್ಮ ಮನೆಯಂಗಳದಲ್ಲಿ ಇನ್ನೊಂದು ಮಲ್ಲಿಗೆ ಅರಳಲಿ!
Tweet media one
4
148
1K
@NomadChandru
Nagathihalli Chandrashekara
8 months
ಕನ್ನಡೇತರರು ಕನ್ನಡ ಕಲಿಯದೆ ಮತ್ತು ಬಳಸದೆ ಬದುಕಲು ಸಾಧ್ಯವಿಲ್ಲ ಎಂಬ ಸಾಮಾಜಿಕ ಬಿಕ್ಕಟ್ಟನ್ನು ನಾವು ತಂದೊಡ್ಡದಿದ್ದರೆ ರಾಜಧಾನಿಯಲ್ಲಿ ಕನ್ನಡಕ್ಕೆ ಉಳಿಗಾಲವಿಲ್ಲ. ಕನ್ನಡದ ನಿರ್ಲಕ್ಷ್ಯವನ್ನು ನಾನು ಇತ್ತೀಚೆಗೆ ಕೆಲವು ಜಿಲ್ಲಾ ಕೇಂದ್ರಗಳಲ್ಲೂ ಗಮನಿಸಿದ್ದೇನೆ. ನಮ್ಮ ಬರಹಗಾರರು, ಚಲನಚಿತ್ರ ಕಲಾವಿದರು ಕನ್ನಡ ಹೋರಾಟಗಾರರನ್ನು ಬೆಂಬಲಿಸಬೇಕು.
30
242
1K
@NomadChandru
Nagathihalli Chandrashekara
2 years
My dear black beauty ‘LUCID’
Tweet media one
28
19
1K
@NomadChandru
Nagathihalli Chandrashekara
4 years
#Throwback ಇದು ನನ್ನ ಶತಾವತಾರಗಳಲ್ಲೊಂದು. ಅಂದ ಕಾಲತ್ತಿಲೆ ಹೊಟ್ಟೆಪಾಡಿಗೆ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಿದ್ದೆ. ಮುಂಡೇದಿಕ್ಕೆ ಬೆಲ್ ಬಾಟಮ್ ಬೇರೆ ಕೇಡು!
Tweet media one
42
39
1K
@NomadChandru
Nagathihalli Chandrashekara
3 years
ಇದು ಹಳ್ಳಿ ಪ್ರತಿಭೆ. ಯಾವ ಗಾಡ್ ಫಾದರ್ ಇಲ್ಲದೆ ಕೆಳಸ್ತರದಿಂದ ಕಾರ್ಮಿಕನಾಗಿ ಬಂದು ಕೋಟಿ ನಿರ್ಮಾಪಕನಾಗಿ ಬೆಳೆದ ಸಾಹಸಮಯ ಕಥೆ. ವಿನಯವಂತ, ಮಿತಭಾಷಿ, ಹಸನ್ಮುಖಿ, ಸಿನಿಮೋಹಿ ಕೋಟಿ ರಾಮುಗೆ ಕೋಟಿ ನಮನ.
9
76
1K
@NomadChandru
Nagathihalli Chandrashekara
2 years
ಇಂದು ಎರಡು ಸುದ್ದಿಗಳುಃ ಚಾಮರಾಜನಗರದ ಹಳ್ಳಿಯಲ್ಲಿ ಪರಿಶಿಷ್ಟ ಮಹಿಳೆ ನೀರು ಕುಡಿದ ಟ್ಯಾಂಕ್ ನ ಗೋಮೂತ್ರದಿಂದ ಶುದ್ಧೀಕರಣ.ಬಳ್ಳಾರಿಯಲ್ಲಿ ಮಂತ್ರಿ ಮಹೋದಯರಿಂದ ಪರಿಶಿಷ್ಟರ “ನವಶಕ್ತಿ” ಸಮಾವೇಶ.ನಮ್ಮ ವ್ಯವಸ್ಥೆಯ ವಿರೋಧಾಭಾಸ.ಇನ್ನೂ ಎಷ್ಟು ಕಾಲ ಈ ಅಸ್ಪೃಶ್ಯತೆಯ ಆಚರಣೆ? ನಾಚಿಕೆಗೇಡು!
23
181
1K
@NomadChandru
Nagathihalli Chandrashekara
3 years
ಯಾರಾದರೂ ಕನ್ನಡವ ಕುಲಗೆಡಿಸಿ ಬೇಜವಾಬ್ದಾರಿಯಿಂದ ಬಳಸಿದಾಗ; ಸಾರ್ವಜನಿಕವಾಗಿ ಅವಿನಯದಿಂದ ನಡೆದುಕೊಂಡಾಗ; ಓರಗೆಯವರ ಯಶ ಕಂಡು ಕರುಬುವಾಗ; ಜೀವನ ಮೌಲ್ಯಗಳ ಮರೆತು ಹಣದ ಹಿಂದೆ ಓಡುವಾಗ -ಈ ಹಿರಿಯಣ್ಣ ಈಗಲೂ ಬದುಕಿರಬಾರದಿತ್ತೆ ಎನಿಸುತ್ತೆ. ಬದುಕುವ ಬಗೆ ತೋರಿದ ನಿಮ್ಮನ್ನು ಈ ಹುಟ್ಟುಹಬ್ಬದಂದು ಮಾತ್ರವಲ್ಲ- ಸದಾ ನೆನೆಯುವೆ.
Tweet media one
Tweet media two
10
142
1K
@NomadChandru
Nagathihalli Chandrashekara
1 year
ಬಿಜೆಪಿಗೆ ಒಂದು ವಿನಮ್ರ ಸಲಹೆ. ವಿಪಕ್ಷ ನಾಯಕನಿಲ್ಲದೆ ವಿಧಾನ ಸಭೆ ಅಪೂರ್ಣ ಎನಿಸುತ್ತಿದೆ. ನಿಮಗೆ ಆಯ್ಕೆ ತೀರಾ ಕಷ್ಟವಾದಲ್ಲಿ ಕಾಂಗ್ರೆಸ್ ನಲ್ಲೇ ಸೂಕ್ತರಾದ ಒಬ್ಬರನ್ನು ಹುಡುಕಿ ವಿಪಕ್ಷ ನಾಯಕನ ಹುದ್ದೆಯನ್ನು ‘ಔಟ್ ಸೋರ್ಸ್’ ಮಾಡಿ!
146
115
1K
@NomadChandru
Nagathihalli Chandrashekara
1 year
‘ಕಷ್ಟದ’ ಸಮಯದಲ್ಲಿ ಪಕ್ಷ ನಮ್ಮನ್ನು ಕೈ ಬಿಟ್ಟಿದೆ ಎಂದು ಟಿಕೆಟ್ ಸಿಗದ ಕೆಲವು ಅಭ್ಯರ್ಥಿಗಳು ‘ಕಣ್ಣೀರು’ ಹಾಕುವ ವರದಿಯನ್ನು ಓದುತ್ತಿರುತ್ತೇವೆ. ಯಾರ ಕಷ್ಟ? ತಮ್ಮ ವೈಯಕ್ತಿಕ ಕಷ್ಟಗಳನ್ನು ನಿವಾರಿಸಿಕೊಳ್ಳಲು ಚುನಾವಣೆಗಳೇನು ಬಂಡವಾಳ ಹೂಡಿ ಲಾಭ ತಂದುಕೊಟ್ಟು ಅವರ ಕಷ್ಟ ಪರಿಹರಿಸುವ ಉದ್ಯಮಗಳೇ?
46
171
1K
@NomadChandru
Nagathihalli Chandrashekara
1 year
Tweet media one
50
118
1K
@NomadChandru
Nagathihalli Chandrashekara
1 year
ನಂದಿನಿ ನಮ್ಮವಳು ಅಲ್ಲ- ‘ನನ್ನವಳು’.ಆರೋಗ್ಯದಾಯಿನಿ. ನಾನು ಕೆಎಂಎಫ್ ನ ಮೈಸೂರು ಡೈರಿಯಲ್ಲಿ ಆರು ವರ್ಷ ದಿನಗೂಲಿ ಜತೆ ವ್ಯಾಸಂಗ ಮಾಡಿ ಬದುಕು ಕಟ್ಟಿಕೊಂಡವನು. ನಾಗತಿಹಳ್ಳಿಯಲ್ಲಿ ಹೆಣ್ಣುಮಕ್ಕಳಿಗಾಗಿ ಮಾಡಿಕೊಟ್ಟ ಅಭಿವ್ಯಕ್ತಿ ಹಾಲು ಉತ್ಪಾದಕರ ಸಂಘ ಯಶಸ್ವಿಯಾಗಿ ನಡೆಯುತ್ತಿದೆ. ನಂದಿನಿ ಇಲ್ಲದ ಗ್ರಾಮ್ಯ ಬದುಕನ್ನು ಕಲ್ಪಿಸಿಕೊಳ್ಳುವುದೂ ಕಷ್ಟ.
72
218
1K
@NomadChandru
Nagathihalli Chandrashekara
3 years
ಅಪ್ಪು ನಿರ್ಗಮಿಸುವ ಕೆಲವೇ ಕ್ಷಣಗಳ ಮುನ್ನ ಚಿತ್ರೀಕರಿಸಿದ್ಜ ವಿಡಿಯೋ….
18
94
1K
@NomadChandru
Nagathihalli Chandrashekara
3 years
ಆಸ್ಪತ್ರೆಯಿಂದ ಬಂದು ಆ ಅನುಭವಗಳನ್ನು ಹಾಸ್ಯಪ್ರಜ್ಞೆಯಿಂದ ಹಂಚಿಕೊಳ್ಳುತ್ತೀರಿ ಅಂದು ಕೊಂಡಿದ್ದೆ. ಹೊರಟೇಬಿಟ್ಟಿರಿ. ನಮ್ಮ ಸರಳ ವಿವಾಹ ನಿಮ್ಮ ಉಪಸ್ಥಿತಿಯಲ್ಲಿ ಜರುಗಿತ್ತು. ನಿಮ್ಮ ಗೀತೆ ‘ಆ ಬೆಟ್ಟದಲ್ಲಿ’ನನ್ನ ಚಿತ್ರದಲ್ಲಿ ಬಳಸಿಕೊಂಡಿದ್ದೆ. ನಿಮ್ಮೊಡನೆ ಕಳೆದ ಖಾಸಗಿ/ ಸಾಹಿತ್ಯಿಕ ಕ್ಷಣಗಳು ಅಸಂಖ್ಯ/ಅಮೂಲ್ಯ.ಯಾವುದನ್ನು ನೆನೆಯಲಿ? ಕಂಬನಿ.
Tweet media one
17
88
1K
@NomadChandru
Nagathihalli Chandrashekara
3 years
ಕನ್ನಡಕ್ಕೆ ರಾಷ್ಟ್ರೀಯ ಗೌರವ ತಂದುಕೊಟ್ಟ ಪ್ರತಿಭಾಶಾಲಿ ಯುವಕಲಾವಿದ ಸಂಚಾರಿ ವಿಜಯ್ ಗುಣಮುಖನಾಗಲಿ.
Tweet media one
53
77
1K
@NomadChandru
Nagathihalli Chandrashekara
2 years
ಪಂಚದ್ರಾವಿಡ ಭಾಷಾ ಸುಂದರಿ, ಕನ್ನಡದ ಕಿರಿಯ ಸೋದರಿ ತುಳುವಿನ ಜನಪದ ಸಂಪತ್ತು ಬಗೆದಷ್ಟೂ ಭಂಡಾರ. ಇದು ‘ಕಾಂತಾರ’ದ ಯಶಸ್ಸಿನ ಮೂಲಧಾತುಗಳಲ್ಲೊಂದು. ಕ್ರಿಯಾಶೀಲ ರಿಷಭ್ ಮತ್ತು ತಂಡದ ಎಲ್ಲರಿಗೂ ಅಕ್ಕರೆಯ ಅಭಿನಂದನೆಗಳು.
16
53
1K
@NomadChandru
Nagathihalli Chandrashekara
1 year
ಈಗ ಇಷ್ಟು. ಗೆದ್ದವರು ಬೀಗಬೇಡಿ. ಎಲ್ಲರನ್ನೂ ಒಳಗೊಳ್ಳಿ. ದ್ವೇಷ ಬೇಡ. ತಬ್ಭಲಿ ಜಾತಿಗಳ ಯೋಗ್ಯ ನಾಯಕರಿಗೆ ಸೂಕ್ತ ಜಾಗ ಕೊಡಿ. ಬ್ರಾಹ್ಮಣ, ವಕ್ಕಲಿಗ, ಲಿಂಗಾಯತ, ಕುರುಬ ಮುಂತಾದ ಮೇಲಿನವರನ್ನು ಅಧಿಕಾರದಿಂದ ದೂರವಿಡಿ. ಕನಿಷ್ಠ 10% ಭ್ರಷ್ಟಾಚಾರದಿಂದಲಾದರೂ ದೂರವಿರಿ. ಸೋತವರು ಆತ್ಮಾವಲೋಕನ ಮಾಡಿಕೊಳ್ಳಿ. ಗೆದ್ದವರು ಭಯಂಕರ ವಿನಯವಂತರಾಗಿರಿ.
91
118
1K
@NomadChandru
Nagathihalli Chandrashekara
2 years
ವಿಶ್ವದ #ಕಮರ್ಶಿಯಲ್ #ಸಿನಿಮಾ, #ಕನ್ನಡ ದತ್ತ ಅಚ್ಚರಿ ಮತ್ತು ಅಭಿಮಾನದಿಂದ ನೋಡುವಂತೆ ಮಾಡಿದ #ಕೆಜಿಎಫ್-2 ಚಿತ್ರತಂಡಕ್ಕೆ ಹಾರ್ದಿಕ ಅಭಿನಂದನೆಗಳು. ಇನ್ನೂ ಚಿತ್ರ ನೋಡಲಾಗಿಲ್ಲ.ಶಿಳ್ಳೆ, ಚಪ್ಪಾಳೆಗಳ ಅಬ್ಬರ ಮುಗಿದ ಮೇಲೆ ಆರಾಮವಾಗಿ ನೋಡಿ ಆಸ್ವಾದಿಸಬೇಕೆಂದಿದ್ದೇನೆ. ಏಕೆಂದರೆ ಚಿತ್ರದ ಸೂಕ್ಷ್ಮ ಅಂಶಗಳು ಗದ್ದಲದಲ್ಲಿ ಕಾಣಿಸದೆ ಹೋಗಬಹುದು.
12
52
1K
@NomadChandru
Nagathihalli Chandrashekara
3 months
ಬಾಲಕನಾಗಿದ್ದಾಗ ಊರ ಬದಿ ಹೆದ್ದಾರಿಯಲ್ಲಿ ಹೋಗುತ್ತಿದ್ದ ‘ಆಲ್ ಇಂಡಿಯಾ ಪರ್ಮಿಟ್ ಟ್ರಕ್’ ಗಳನ್ನು ನೋಡಿ ‘ಟ್ರಕ್ ಡ್ರೈವರ್’ ಆಗಬೇಕೆಂದು ಆಸೆಪಟ್ಟಿದ್ದೆ. ಅದು ದೇಶ ಸುತ್ತುವ ಆಸೆಯಾಗಿತ್ತು. ಈ ಆಸೆ ಮೊನ್ನೆ ಭಾಗಶಃ ಈಡೇರಿತು. ಇದು ಇಲಾನ್ ಮಸ್ಕ್ ನ ‘ಸೈಬರ್ ಟ್ರಕ್’!
Tweet media one
Tweet media two
Tweet media three
Tweet media four
25
22
1K
@NomadChandru
Nagathihalli Chandrashekara
2 years
ಕಾಡಿನಿಂದ ಬಂದು ನಾಡನ್ನು ಗೆದ್ದು ಸಪ್ನ ಪುಸ್ತಕದಂಗಡಿಯಲ್ಲಿ ಸಿಕ್ಕ ಸಪ್ತಮಿ ತಾರೆ!
Tweet media one
1
18
1K
@NomadChandru
Nagathihalli Chandrashekara
3 years
#CMKarnataka #Siddaramaiah #COVIDEmergency #bbmp ಒಂದು ದೊಡ್ಡ ಮರ 500ಜನಕ್ಕೆ ಬೇಕಾಗುವಷ್ಟು ಆಮ್ಲಜನಕ ಕೊಡುತ್ತೆ. ಆ ಮರ ಕಡಿದು ನಾವು ಆಮ್ಲಜನಕವನ್ನು ಆಮದು ಮಾಡಿಕೊಳ್ತಿದ್ದೇವೆ!ಇದಲ್ವಾ ವಿಪರ್ಯಾಸ? ಒಬ್ಬ ಬಡ ರೋಗಿಯ ಹಾಸಿಗೆಗೆ 3 ದಿನದಿಂದ ಬೇಡುತ್ತಿದ್ದೇನೆ. ಎರಡು ಲಕ್ಷ ಕೇಳ್ತಿದ್ದಾರೆ...ಈ ಭವ್ಯ ಭಾರತ ಬಡವರಿಗಲ್ಲ ಕಣ್ರೀ.
77
193
1K
@NomadChandru
Nagathihalli Chandrashekara
4 years
ಅಭಿಮಾನೀ ಮಿತ್ರರು ಕನಕಪುರದಿಂದ ಕಳುಹಿಸಿರುವ ಈ ಚಿತ್ರಗಳನ್ನು ವಿವರಿಸುವ ಅಗತ್ಯವಿಲ್ಲ. ಹದಿಮೂರು ವರ್ಷಗಳ ಹಿಂದಿನವು! ವಿಷ್ಣು ಅವರ ಗಾಢ ಸ್ನೇಹ ನೆನಪಾಗುತ್ತಿದೆ. ಅಂಥ ಚಿನ್ನದ ದಿನಗಳು/ಹೌಸ್ ಫುಲ್ ಗಳು ಕನ್ನಡಕ್ಕೆ ಮತ್ತೆ ಬರುವಂತಾಗಲಿ!
Tweet media one
Tweet media two
13
125
1K
@NomadChandru
Nagathihalli Chandrashekara
2 years
ನಿಮ್ಮ ಅನನ್ಯ ಸ್ನೇಹ, ಅಪೂರ್ವ ಒಡನಾಟ, ಪಾತ್ರಕ್ಕೆ/ಪ್ರತಿ ಸಂಭಾಷಣೆಗೆ ನೀವು ಮಾನಸಿಕವಾಗಿ ತಯಾರಾಗುತ್ತಿದ್ದ ಶ್ರದ್ಧೆ,ಎಲ್ಲರನ್ನೂ ಗೌರವಿಸುತ್ತಿದ್ದ ಸನ್ನಡತೆ-ಈ ನಿಮ್ಮ ಜನುಮದಿನದಂದು ನೆನಪಾಗುತ್ತಿವೆ. ಪ್ರಣಾಮಗಳು.
Tweet media one
8
99
1K
@NomadChandru
Nagathihalli Chandrashekara
4 years
ಈ ನಮ್ಮ ಕಪ್ಪಟ್ಟೆ ಕರಿವದನ ರಾಯ ಬೆಕ್ಕಟ್ಟೆ ಬಿಳಿಯಾದ ಕಾರಿನಾ ಒಡೆಯ ಥಟ್ಟಂತ ಯಾರೆಂದು ಹೇಳಿದವರಿಗೆಲ್ಲ ಸೂಕ್ತ ಬಹುಮಾನವಂತು ಇಲ್ಲವೇ ಇಲ್ಲ!
Tweet media one
81
26
1K
@NomadChandru
Nagathihalli Chandrashekara
10 months
ನಂಬೋದು ಕಷ್ಟ. ಆದರೆ ನಂಬಲೇಬೇಕು. ಹೊಸಬರ ಜತೆಗೂಡಿ ಮಾಡಿದ ನನ್ನ ಎರಡನೆಯ “ಅಪರಾಧ” ಕ್ಕೆ ಮೂರು ದಶಕಗಳಾಯಿತೆೇ?
Tweet media one
42
42
1K
@NomadChandru
Nagathihalli Chandrashekara
2 years
ಭೂಮಿ ಗುಂಡಗಿದೆ.ಮತ್ತೆ ಮತ್ತೆ ಸಿಗುತ್ತೇವೆ.ಮೂರು ದಶಕಗಳ ಮುಕ್ಕಾಗದ,ಮುಪ್ಪಾಗದ ಮೈತ್ರಿ. ಇಂದು “ಸಪ್ನ”ಮಳಿಗೆಯ ೨೧ನೇ ಶಾಖೆಯ ಉದ್ಘಾಟನೆಯಲ್ಲಿ…
Tweet media one
7
15
1K
@NomadChandru
Nagathihalli Chandrashekara
3 years
#Yuvarathnaa #PuneethRajkumar #dasadarshan #Kichchasudeep #CMKarnataka ಇದು ಖಂಡನೀಯವಾದ ಏಕಾಏಕಿ ನಿರ್ಧಾರ. ಎಲ್ಲ ವಿಭಾಗಗಳಿಗೆ ಒಂದು ವಾರದ ಪೂರ್ವ ಸೂಚನೆಯನ್ನಾದರೂ ಕೊಡಬಾರದಿತ್ತೆ? ಚಿತ್ರರಂಗ ಇಂದು ಅತ್ಯಂತ ದುಸ್ಥಿತಿಯಲ್ಲಿದೆ. ಕುರುಡಾದ, ವಿವೇಚನೆ ಇಲ್ಲದ ಸರ್ಕಾರ ಇದು.
9
199
985
@NomadChandru
Nagathihalli Chandrashekara
2 years
ಕಾಲು ಶತಮಾನದ ಹಿಂದೆ ಸೂರ್ಯ-ಭೂಮಿಯರು ಪ್ರೇಮದ ಪಿಸುಮಾತಾಡಿಕೊಂಡಿದ್ದ ಚಿನ್ನದ ಸೇತುವೆಯ ಸನ್ನಿಧಿಗೆ ಕ್ಷೇಮ ವಿಚಾರಿಸಲು ಇಂದು ಚಂದ್ರ ಬಂದಿದ್ದ.
Tweet media one
23
48
1K
@NomadChandru
Nagathihalli Chandrashekara
2 years
Dear Appu, How can we forget your smile? …A literary smile …A unpretentious smile ……A non-filmy smile! Missing U lot….
Tweet media one
2
72
976
@NomadChandru
Nagathihalli Chandrashekara
1 year
ಥೇ��ರ್ ನಲ್ಲೇ ಸಿನಿಮಾ ನೋಡುವವ ನಾನು. ಇದು ಹೇಗೋ ತಪ್ಪಿಸಿಕೊಂಡಿತ್ತು.ಅಮೆಜಾನ್ ನಲ್ಲಿ ನೋಡಿದೆ. ‘ಆಚಾರ್ ಅಂಡ್ ಕೋ’!ಎಷ್ಟು ಭಿನ್ನ,ಸರಳ,ಸುಂದರ ಹಳಹಳಿಕೆಯ ಚಿತ್ರ! ಸಿಂಧು,ಬಿಂದುಮಾಲಿನಿಯರನ್ನೊಳಗೊಂಡು ಎಲ್ಲರಿಗೂ ಅಕ್ಕರೆ. ಪಿ.ಆರ್.ಕೆ. ಯ ಅಶ್ವಿನಿಯವರು ಸದಭಿರುಚಿಯ ಚಿತ್ರ ನಿರ್ಮಿಸಿದ್ದಾರೆ. ಇದು ನಮ್ಮ ಅಪ್ಪುವಿಗೆ ಸಲ್ಲಿಸಿರುವ ನಿಜವಾದ ಗೌರವ.
Tweet media one
11
64
961
@NomadChandru
Nagathihalli Chandrashekara
2 years
ಕಲ್ಲನ್ನೂ ಕಡಿದರು ಮರವನ್ನೂ ಕಡಿದರು ಕಡಿದವರುಳಿದರೆ ಕೂಡಲಸಂಗಮದೇವ
Tweet media one
1
36
946
@NomadChandru
Nagathihalli Chandrashekara
1 year
“ಕ್ಷೇತ್ರಪತಿ”ಸಿನಿಮಾ ನೋಡಿದೆ. ಹಲವು ಮಿತಿಗಳಾಚೆಯೂ ಮೆಚ್ಚಬೇಕಾದ ಸಿನಿಮಾ. ರೈತ ಬವಣೆಗಳನ್ನು ಪರಿಣಾಮಕಾರಿಯಾಗಿ ಹೇಳುವ ಈ ಚಿತ್ರಕ್ಕೆ ಹಣ ಹೂಡಿದ ನಿರ್ಮಾಪಕರನ್ನು,ತಂಡವನ್ನು ಅಭಿನಂದಿಸಲೇಬೇಕು.ನಾಯಕ ನವೀನ್ ಶಂಕರ್ ಇಡೀ ಚಿತ್ರವನ್ನು ಹೊತ್ತು ಸಾಗಿದ್ದಾನೆ. ಒಂದು ಮನವಿ.ಇಂಥ ಚಿತ್ರಗಳನ್ನು ನಮ್ಮ ಪ್ರೇಕ್ಷಕ ಉಳಿಸಿಕೊಳ್ಳಬೇಕು.
Tweet media one
Tweet media two
10
93
912
@NomadChandru
Nagathihalli Chandrashekara
3 years
Tweet media one
4
78
892
@NomadChandru
Nagathihalli Chandrashekara
2 years
#SudhaMurthy ಸಂವಾದದ ತುಣುಕುಃ ೪ “ರಿಷಿಯ ಇಂಗ್ಲೆಂಡ್ ಆಳ್ವಿಕೆ ಕನಿಷ್ಠ ನೂರು ದಿನಗಳನ್ನು ಯಶಸ್ವಿಯಾಗಿ ಪೂರೈಸುವವರೆಗೆ ಏನೂ ಹೇಳಲಾಗದು.ಅವರ ಪಕ್ಷದ ವಿದ್ಯಮಾನಗಳು, ರಾಜಕೀಯ ಏರಿಳಿತಗಳು ನಮಗೆ ತಿಳಿಯುವುದಿಲ್ಲ. ಆ ಪ್ರಪಂಚವೇ ಬೇರೆ. ನಮ್ಮ ಪ್ರಪಂಚವೇ ಬೇರೆ.ಅಧಿಕಾರ ಶಾಶ್ವತವಲ್ಲ ಎಂಬ ಮಾತು ಮಾತ್ರ ಸತ್ಯ.”
Tweet media one
6
36
901
@NomadChandru
Nagathihalli Chandrashekara
5 years
Tweet media one
105
102
848
@NomadChandru
Nagathihalli Chandrashekara
2 years
ಈ ಮುಸ್ಸಂಜೆ ನನ್ನ ಪ್ರೀತಿಯ ಶಾಲೆಯನ್ನು ನೋಡಬೇಕೆನಿಸಿತು. ಇದು ನನಗೆ 1985ರಲ್ಲಿ 8 ಚಿನ್ನದ ಪದಕ 2 ನಗದು ಬಹುಮಾನಗಳನ್ನು ತಂದು ಕೊಟ್ಟ ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ. ಇದು ಕಟ್ಟಡವಲ್ಲ; ನನ್ನ ಪಾಲಿನ ತಾಯಿ.
Tweet media one
Tweet media two
Tweet media three
4
26
884
@NomadChandru
Nagathihalli Chandrashekara
3 years
ಕಾಶ್ಮೀರದ ಸೇಬಿನ ತೋಟ
11
41
842
@NomadChandru
Nagathihalli Chandrashekara
2 years
ಯಾವಕಾರು ಯಾರಹಿಡಿಗೋ ಯಾರಪಯಣ ಯಾವಕಡೆಗೋ
Tweet media one
17
21
840
@NomadChandru
Nagathihalli Chandrashekara
4 years
ನ್ಯೂಯಾರ್ಕ್ ಕನ್ನಡಕೂಟ ಕನ್ಡಡಶಾಲೆ ಆರಂಭ ಮಾಡುತ್ತಿದೆ. ಬಹುಭಾಷಿಕ ನ್ಯೂಯಾರ್ಕ್ ನಲ್ಲಿ ನಮ್ಮ ಕನ್ನಡವೂ ಕೇಳುವಂತಾಗಲಿ.
11
105
821
@NomadChandru
Nagathihalli Chandrashekara
1 year
“ಆಯುಷ್ಮಾನ್ ಭವ. ಏನಾದರೂ ಆಗು- ಮಾನವನಾಗಬೇಡ.”
Tweet media one
12
41
833
@NomadChandru
Nagathihalli Chandrashekara
10 months
ಯಾರು ಹಿತವರು ಈ ಮೂವರೊಳಗೆ? ಬಹುಮತವಿದ್ದೂ ಬಾಳಲು ಬರದ ಕಾಂಗ್ರೆಸ್ಸೊ? ಸೋತರೂ ಆತ್ಮಾವಲೋಕನ ಮಾಡಿಕೊಳ್ಳದ ಬಿಜೆಪಿಯೋ? ಅಸ್ತಿತ್ವಕ್ಕಾಗಿ ಆತ್ಮವನ್ನೇ ಮಾರಿಕೊಳ್ಳುತ್ತಿರುವ ಜೆಡಿಎಸ್ಸೊ? ಯಾರು ಹಿತವರು ಈ ಮೂವರೊಳಗೆ?
88
81
832
@NomadChandru
Nagathihalli Chandrashekara
3 years
ದಯಮಾಡಿ ವಿಕೃತ ಸುಳ್ಳು ಸುದ್ದಿ ಹರಡಬೇಡಿ ಮತ್ತು ನಂಬಬೇಡಿ. ಕವಿ ಸಿದ್ಧಲಿಂಗಯ್ಯನವರು ಕ್ಷೇಮ.
5
51
816
@NomadChandru
Nagathihalli Chandrashekara
2 years
ನಮ್ಮ ಟೆಂಟ್ ಸಿನಿಮಾ ಶಾಲೆಯ ಹಿರಿಯ ವಿದ್ಯಾರ್ಥಿಯ ಜತೆ ಕಿರಿಯ ಪ್ರತಿಭೆಗಳೆಲ್ಲ ಕೂಡಿ ಒಂದು ಸಾಹಸ ಮಾಡಿದ್ದಾರೆ. ಸಹೃದಯರ ಉತ್ತೇಜನವಿರಲಿ. ಈ ಕಾರ್ಯಕ್ರಮಕ್ಕೆ ದಯಮಾಡಿ ಬನ್ನಿ.ಸರ್ವರಿಗೂ ಸ್ವಾಗತ!
Tweet media one
8
196
800
@NomadChandru
Nagathihalli Chandrashekara
4 years
ನಾವು ಪಂಚದೀಪಗಳು..
2
20
792
@NomadChandru
Nagathihalli Chandrashekara
3 years
……ಒಬ್ಬರ ಹಿಂದೊಬ್ಬರು! ನಟ ಅಶೋಕ್ ರಾವ್ ಅಸುನೀಗಿದ್ದಾರೆ.ನನ್ನ “ಬಾ ನಲ್ಲೆ ಮಧುಚಂಧ್ರಕೆ” ಚಿತ್ರದಲ್ಲಿ ತನಿಖಾಧಿಕಾರಿ ‘ರಾಜೀವ್ ಸಕ್ಸೇನಾ’ ಆಗಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದರು. ನಿಗರ್ವಿ ಮತ್ತು ವೃತ್ತಿಪರ ನಟ. ಸಂತಾಪಗಳು.
Tweet media one
39
55
799
@NomadChandru
Nagathihalli Chandrashekara
2 years
ನಮ್ಮೂರ ಪಕ್ಕದ ಹಿರೀಸಾವೆ ಟೆಂಟ್ ನಲ್ಲಿ ಮೊದಲು ನೋಡಿ ಭಾವತಪ್ತನಾಗಿದ್ದು ಇವರ “ಕಸ್ತೂರಿ ನಿವಾಸ”.ಕಾದಂಬರಿ-ಸಿನಿಮಾಗಳ ಸುವರ್ಣ ಸೇತುವೆಯಂತಿದ್ದ ದೊರೈ-ಭಗವಾನ್ ಜೋಡಿ ಅಪೂರ್ವ. ಫಿಲಂ ಫೆಸ್ಟಿವಲ್ ಗಳಿಗೆ ಹಾಜರಾಗುತ್ತಾ ಇಳಿವಯದವರೆಗೂ ಚಿತ್ರ ಮಾಡುತ್ತಿದ್ದ ಭಗವಾನ್ ಕ್ರಿಯಾಶೀಲ.ನನ್ನ ಅಶ್ರುತರ್ಪಣ.
Tweet media one
8
30
809
@NomadChandru
Nagathihalli Chandrashekara
4 years
ಈಗ ಬರಿಯ ನೆನಪಿನ ಉತ್ಸವ..
Tweet media one
2
18
776
@NomadChandru
Nagathihalli Chandrashekara
1 year
ಇದೊಂದು ಸಣ್ಣಘಟನೆ ಎಂದು ಪರಿಗಣಿಸಬಾರದು.ಜನ ತಮ್ಮ ಖಾಸಗಿ ನಂಬಿಕೆಗಳನ್ನು ಅವರ ಮನೆಯೊಳಗೆ ಹೇಗಾದರೂ ಆಚರಿಸಿಕೊಳ್ಳಲಿ.ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ವಾಸ್ತು ವಿರೋಧಿ ನಡೆ ಅವರೆಲ್ಲ ಮಂತ್ರಿಗಳಿಗೂ ಅಧಿಕಾರಿಗಳಿಗೂ & ಸರ್ಕಾರೀ ಕಛೇರಿಗಳಿಗೂ ಮಾದರಿಯಾಗಲಿ. ಒಳ್ಳೆಯ ಗಾಳಿ,ಬೆಳಕು & ಹೃದಯ ನಿಜವಾದ ವಾಸ್ತು. ವಿಜ್ಞಾನದ ಎಲ್ಲ ಬಾಗಿಲುಗಳೂ ತೆರೆಯಲಿ.
50
91
792
@NomadChandru
Nagathihalli Chandrashekara
4 years
ಅಮೆಜಾನ್ ಪ್ರೈಂ ನಲ್ಲಿ ನಿಮಗಾಗಿ “ಇಂಡಿಯಾ ವರ್ಸಸ್ ಇಂಗ್ಲೆಂಡ್” ಮನೆಯಲ್ಲೇ ಮನೋರಂಜನೆ.
10
53
747
@NomadChandru
Nagathihalli Chandrashekara
1 year
ಒಂದು ಅಮೃತಮಯ ನೆನಪು!
Tweet media one
25
34
757
@NomadChandru
Nagathihalli Chandrashekara
5 years
ಈ ಮೂರು ಚಿತ್ರಗಳು ಚೆನ್ನಾಗಿವೆ. ದಯಮಾಡಿ ಹಂಚಿಕೊಳ್ಳಿ.
Tweet media one
Tweet media two
Tweet media three
10
76
737
@NomadChandru
Nagathihalli Chandrashekara
5 years
“ಗೋಡ್ಸೆ ಕೊಂದಿದ್ದು ಗಾಂಧಿ ದೇಹವನ್ನ, ಕಾಂಗ್ರೆಸ್ ಕೊಂದಿದ್ದು ಗಾಂಧಿ ತತ್ವವನ್ನ: —ಸಿ.ಟಿ.ರವಿ” -ಅಂದರೆ ಆರೆಸ್ಸೆಸ್ ಮತ್ತು ಕಾಂಗ್ರೆಸ್ ಎರಡೂ ಭಾರತೀಯರ ಪಾಲಿಗೆ ಜರಾಸಂಧ-ಶಿಶುಪಾಲರಾ? ಸಮಾನ ದುಷ್ಟರಾ ?ಯಾರು ಹೆಚ್ಚು ಕೆಟ್ಟವರು ರವಿಯವರೇ?
42
81
736
@NomadChandru
Nagathihalli Chandrashekara
3 years
ಹಲ್ಲು ಕಚ್ಚಿ ಮನೇಲಿರಿ. ನಿಯಮ ಪಾಲಿಸಿ. ಉಡಾಫೆಯಿಂದ ಅಡ್ಡಾಡದಿರಿ. ಜನ,ಸರ್ಕಾರ ಒಟ್ಟಿಗೇ ಭ್ರಷ್ಟರಾಗಿದ್ದಾರೆ. ರಾಜ ಹೇಗೊ ಹಾಗೆ ಪ್ರಜೆಗಳು. ಎಲ್ಲ ದುರಂತಕ್ಕೂ ಮನುಕುಲವೇ ಕಾರಣ. ಪಾಪದ ಕೆಲವು ಜನ ಮಾತ್ರ ಆದರ್ಶದ ಹೆಸರಲ್ಲಿ ಸೇವೆ ಮಾಡುತ್ತಾ ಸಂಕಟಪಡುತ್ತಿದ್ದಾರೆ. ನಿಮ್ಮನ್ನು ಕಾಪಾಡಿಕೊಳ್ಳುವಷ್ಟು ಜಾಗರೂಕವಾಗಿರಿ. ನನ್ನ ಸವಿನಯ 🙏ಪ್ರಾರ್ಥನೆ.
10
80
728
@NomadChandru
Nagathihalli Chandrashekara
6 years
ಟೀವಿಯ ಸುದ್ದಿಬಾಕ ವಿದ್ಯುನ್ಮಾನ ವಿದ್ವನ್ಮಣಿಗಳೇ, ಮೂರು ದಿನದಿಂದ ಮಾರಾಟಕ್ಕಿರುವ ಕುದುರೆಗಳನ್ನೇ ತೋರುತ್ತಿದ್ದೀರಿ. ಕಣ್ಮರೆಯಾದ ಕೃಷಿಕ ಸಂತ ನಾಡೋಜ ನಾರಾಯಣರೆಡ್ಡಿಯವರ ಸಾಕ್ಷ್ಯಚಿತ್ರ ತೋರಲು ನಿಮ್ಮ ಬಳಿ ಸಣ್ಣ ಸ್ಲಾಟ್ ಇಲ್ಲವೇ?
45
159
708
@NomadChandru
Nagathihalli Chandrashekara
2 years
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರಿಗೆ, ಲಕ್ಷಾಂತರ ಪ್ರವಾಸಿಗಳು ಭೇಟಿ ನೀಡುವ ಹಂಪೆಯ ವಿರೂಪಾಕ್ಷ ದೇಗುಲದ ಎದುರಿನ ಮುತ್ತು ರತ್ನ ಖ್ಯಾತಿಯ ಐತಿಹಾಸಿಕ ರಥ ಬೀದಿ ಕೆಟ್ಟು ಹಾಳಾಗಿದೆ.ನಿಮ್ಮಲ್ಲಿ ಹಲವು ದಕ್ಷ ಅಧಿಕಾರಿಗಳಿದ್ದಾರೆ. ಕೇಂದ್ರ/ರಾಜ್ಯ ಸೇರಿ ಸರಿಪಡಿಸಬಹುದು.ಇದು ಅದ್ದೂರಿ ಹಂಪೆ ಉತ್ಸವ ಆಚರಿಸುವುದಕ್ಕಿಂತ ಮುಖ್ಯ.ದಯಮಾಡಿ ಗಮನಿ��ಿ.
14
96
736
@NomadChandru
Nagathihalli Chandrashekara
5 years
ನಮ್ಮ ಚಿತ್ರದ ಶೀರ್ಷಿಕೆ:”ಇಂಡಿಯಾ ವರ್ಸಸ್ ಇಂಗ್ಲೆಂಡ್” ಮತ್ತು ಟ್ಯಾಗ್ ಲೈನ್...”ಆದರೆ ಕ್ರಿಕೆಟ್ ಅಲ್ಲ!”
Tweet media one
28
45
697
@NomadChandru
Nagathihalli Chandrashekara
3 years
#CMKarnataka ದುಡಿಮೆ ನಂಬಿದ್ದ ಜೀವವೊಂದು ದುಡಿವ ಜಾಗದಲ್ಲೇ ಆತ್ಮಹತ್ಯೆ ಮಾಡಿಕೊಂಡಿದೆ. ಕ್ಯಾಬ್ ಚಾಲಕ ಪ್ರತಾಪ್ ಗೆ ಅಶ್ರುತರ್ಪಣ. ಶ್ರಮಿಕ ಬಂಧುಗಳೇ, ದಯವಿಟ್ಟು ದುಡುಕಬೇಡಿ. ಒಳ್ಳೆಯ ದಿನಗಳು ಬಂದೇ ಬರುತ್ತವೆ. ಮಾನ್ಯ ಮುಖ್ಯಮಂತ್ರಿಗಳೇ,ಮಠ/ಜಾತಿ ಪ್ರಾಧಿಕಾರ ಇತ್ಯಾದಿಗಳಿಗೆ ಖರ್ಚು ಮಾಡುವ ಹಣವನ್ನು ಶ್ರಮಿಕ ಸಮುದಾಯಗಳ ಹಸಿವಿಗೆ ವ್ಯಯಿಸಿ.
25
113
714
@NomadChandru
Nagathihalli Chandrashekara
4 years
ವೈಮಾನಿಕ ಜಗತ್ತಿನಲ್ಲಿ ಕಾಣಸಿಗುವ ಹೆಚ್ಚಿನ ಹೆಣ್ಣುಮಕ್ಕಳು ‘ಗಗನಸಖಿ’ ಯಿಂದ ಮುಂದೆ ಹೋಗುವುದಿಲ್ಲ. ಆದರೆ ನಮ್ಮ ಕೊಡಗಿನ ಈ ಧೀರ ಮಹಿಳೆ “ಪುಣ್ಯ ನಂಜಪ್ಪ “ಯುದ್ಧವಿಮಾನದ ಪೈಲಟ್ ಆಗಿದ್ದಾರೆ. ಈ ಪುಣ್ಯವತಿಗೆ ಪ್ರಣಾಮ.
Tweet media one
2
31
703
@NomadChandru
Nagathihalli Chandrashekara
2 years
ಪ್ರಜಾವಾಣಿಗೆ ಋಣಿ
Tweet media one
10
61
685
@NomadChandru
Nagathihalli Chandrashekara
5 years
ಪ್ರಜ್ಞಾವಂತರಿಗೆ ವಿವರಿಸುವ ಅಗತ್ಯವಿಲ್ಲ.
26
202
643
@NomadChandru
Nagathihalli Chandrashekara
1 year
ದಯಮಾಡಿ ಆಮೇಲೆ ಬನ್ನಿ; ಆಯುಕ್ತರು ಒರಗಿದ್ದಾರೆ…
Tweet media one
12
19
661
@NomadChandru
Nagathihalli Chandrashekara
2 years
ವಿಷ್ಣುವರ್ಧನ್ ಅವರು ಬದುಕಿದ್ದಾಗ ಇಲ್ಲಿದ್ದ ಹಳೆಯ ಮನೆಯಲ್ಲಿ ಸವಿದ ಆತಿಥ್ಯ,ನಡೆಸಿದ ಚರ್ಚೆ ಮತ್ತು ಕಳೆದ ಆಪ್ತ ಕ್ಷಣಗಳಿಗೆ ಪಾರವೇ ಇಲ್ಲ.ಇಂದು ಇಲ್ಲಿ ಹೊಸ ಮನೆಯ ಗೃಹೋತ್ಸವ. ಭಾರತಿ ವಿಷ್ಣುವರ್ಧನ್ ಅವರು ನಿರ್ಮಿಸಿರುವ ಈ ಭವ್ಯ ಬಂಗಲೆಯಲ್ಲಿ ಎಲ್ಲ ಸೌಖ್ಯ ನೆಲೆಸಲಿ.
Tweet media one
1
26
658
@NomadChandru
Nagathihalli Chandrashekara
1 year
Tweet media one
59
58
650
@NomadChandru
Nagathihalli Chandrashekara
2 years
“ಅಮ್ಮಾ ಅವನ್ಗೆ ಹೇಳು. ನಮ್ ಫೋಟೋ ತೆಗಿಯೋದ್ ಬೇಡಾಂತ…”
3
16
644
@NomadChandru
Nagathihalli Chandrashekara
1 year
ಮರೆಯಲಾಗದ ಮಧುರ ಅನುಭವ!
Tweet media one
7
25
643
@NomadChandru
Nagathihalli Chandrashekara
2 years
ಕೊಟ್ರೇಶಿ ಅವ್ವ ,ದಿಬ್ಬನ ಎಂಡ್ರು ಮುಖ್ಯವಾಗಿ ಒಡಲಾಳದ ಸಾಕವ್ವ, ಬೆಂಕಿಯಲ್ಲಿ ಅರಳಿದ ಸಂಪಿಗೆ, ಈ ಅಸಲು ಪ್ರತಿಭೆ ಮಿನಿಸ್ಟ್ರಾದಾಗ ಕೈಗೇ ಸಿಗುತ್ತಿರಲಿಲ್ಲ.ಗತ್ತು ಅಂದರೆ ಗತ್ತು! ಮನುಷ್ಯರಿಗೆ ಅಧಿಕಾರ, ಅಂತಸ್ತು ಇಲ್ಲದೆ ಇರುವಾಗ ಮಾತನಾಡಿಸುವುದು ಮತ್ತು ಅಪ್ಪಿಕೊಳ್ಳುವುದು ಎಷ್ಟೊಂದು ಸಹಜ; ಎಷ್ಟೊಂದು ಚೆನ್ನ!
Tweet media one
10
19
640
@NomadChandru
Nagathihalli Chandrashekara
3 years
ಎಲ್ಲ ಸಾಮಾಜಿಕ ಪಾಪಗಳು ಮತ್ತು ಭ್ರಷ್ಟತೆ ಬಗ್ಗೆ ಪಕ್ಷಾತೀತವಾಗಿ ಪ್ರತಿಭಟಿಸುತ್ತಿದ್ದ ಶತಾಯುಷಿ ದೊರೆಸ್ವಾಮಿ ದೂರವಾಗಿದ್ದಾರೆ. ಈ ಸರಳಾತಿಸರಳ ಜೀವಿ ನಮ್ಮ ಹಳ್ಳಿಯ ಕಾರ್ಯಕ್ರಮಕ್ಕೂ ಬಂದಿದ್ದರು. ಪೊಲೀಸ್ ಅಧಿಕಾರಿ ಅನುಷಾ ಮತ್ತು ವೈದ್ಯ ಗೌತಮ್ ಅವರ ಸರಳ ಮಂತ್ರಮಾಂಗಲ್ಯ ವಿವಾಹಕ್ಕೆ ಬಂದು ಹರಸಿದ್ದರು. ಗಾಂಧಿಯುಗದ ಕೊಂಡಿಯೊಂದು ಕಳಚಿ ಹೋಯಿತು.
Tweet media one
Tweet media two
7
45
627
@NomadChandru
Nagathihalli Chandrashekara
2 years
ಇಪ್ಪತ್ತು ವರ್ಷಗಳ ನಂತರ ಮತ್ತೆ ಇಲ್ಲಿ…
Tweet media one
Tweet media two
Tweet media three
Tweet media four
5
16
622
@NomadChandru
Nagathihalli Chandrashekara
11 months
“ಕಾವೇರಿ ವಿವಾದ ಈಗ ಎಲ್ಲಿಗ್ ಬಂದಿದೆ? ಎಲ್ಲಿ ಶುರುವಾಯ್ತೋ ಅದು ಅಲ್ಲೇ ನಿಂತಿದೆ!” - ಇಪ್ಪತ್ತೇಳು ವರ್ಷಗಳ ಹಿಂದೆ ನಾನು “ಅಮೆರಿಕಾ! ಅಮೆರಿಕಾ!!”ಚಿತ್ರಕ್ಕೆ ಬರೆದ ಗೀತೆಯ ಸಾಲು.
14
80
623
@NomadChandru
Nagathihalli Chandrashekara
11 months
Tweet media one
15
68
620